- ಜನನ :- ಮೇ 28, 1883
- ಮರಣ :- ಫೆಬ್ರವರಿ 26, 1966
ದೇಶಭಕ್ತಿಯ ಮಹಾರ್ಣವದಲ್ಲಿ ಮಿಂದು ಸಹಸ್ರಾರು ತರುಣ ಮನಗಳಲ್ಲಿ ನಾಡಪ್ರೇಮದ ಭಾವತುಂಬಿದ ಆಧುನಿಕ ದಧೀಚಿ , ಶಸ್ತ್ರ – ಶಾಸ್ತ್ರಗಳ ಮಂತ್ರದ್ರಷ್ಟಾರ ವಿಶ್ವಾಮಿತ್ರ ವೀರ ವಿನಾಯಕ ದಾಮೋದರ ಸಾವರ್ಕರ್ , ಸಹಸ್ರಮಾನದ ಕ್ರಾಂತಿಪುಂಜ.
ಮಹಾರಾಷ್ಟ್ರದ ಭಗೂರಿನ ದಾಮೋದರ ಸಾವರ್ಕರ್ – ರಾಧಾಬಾಯಿ ದಂಪತಿಗಳಿಗೆ 1883 ರ ಮೇ 28 ರಂದು ಜನಿಸಿದ ವಿನಾಯಕ ಛಲ -ಸಾಹಸ – ಹೋರಾಟಗಳ ಪರ್ಯಾಯ , ಬದುಕು ಕ್ರಾಂತಿ ಕುಸುಮಗಳ ಸುಂದರಮಾಲೆ . ಹುತಾತ್ಮ ವಾಸುದೇವ ಬಲವಂತ ಫಡಕೆಯ ಪ್ರಚಂಡ ಸಾಹಸ , ಛಾಪೇಕರ್ ಸಹೋದರರ ತ್ಯಾಗ ಸ್ವಾತಂತ್ರ ಯಜ್ಞದ ಸಮಿಧೆಯಾಗುವ ದೃಢಸಂಕಲ್ಪಕ್ಕೆ ನಾಂದಿಯಾಗಿ , ಬ್ರಿಟಿಷ್ ಸರಕಾರದ ಬಂಗಾಲ ವಿಭಜನೆಯ ಪ್ರಯತ್ನ ಅಭಿನವ ಮಿತ್ರಮೇಳಗಳ ಹುಟ್ಟಿಗೆ ಕಾರಣವಾಯಿತು .
ಕಾಂಗ್ರೆಸ್ನ ಧರ್ಮ ಸಮನ್ವಯದ ಹಗಲುಗನಸು ದೇಶವಿಭಜನೆಯ ದುರಂತ ಕಥೆಗೆ ನಾಂದಿಹಾಡುತ್ತದೆಯೆಂದು ಎಚ್ಚರಿಸಿ , ಹಿಂದುಗಳು ಸೈನ್ಯಶಕ್ತಿಯ ಭಾಗವಾಗಬೇಕೆಂದು ಅಪೇಕ್ಷಿಸಿ , ಹಿಂದು ನರಮೇಧದ ವಿರುದ್ಧ ಧ್ವನಿಯೆತ್ತಿ , ತುಷ್ಟೀಕರಣ , ಓಲೈಕೆಯ ಮಾರ್ಗದ ಅನಾಹುತದ ಬಗ್ಗೆ ಭವಿಷ್ಯವಾಣಿ ನುಡಿದರು. ಗಾಂಧಿಹತ್ಯೆಯ ನೆಪದಲ್ಲಿ, ಗೃಹಬಂಧನಕ್ಕೀಡಾದ ಸಾವರ್ಕರ್, ‘ನನ್ನ ಜೀವಾವಧಿ ಶಿಕ್ಷೆ’, ‘ಮೋಪ್ಲಾ ದಂಗೆ ‘, ‘ಹಿಂದುತ್ವ ‘ ಕೃತಿಗಳ ಮೂಲಕ ಭಾರತದ ಸಾರ್ವಭೌಮತೆಗೆದುರಾದ ದುಷ್ಟಶಕ್ತಿಗಳ ವಿರುದ್ಧ ದೇಶವಾಸಿಗಳನ್ನೆಚ್ಚರಿಸಿದ ಪುಣ್ಯಾತ್ಮ. ಇಚ್ಚಾಮರಣಿಯಂತೆ 1966 ರ ಫೆಬ್ರವರಿ 26 ರಂದು ಪಂಚಭೂತಗಳಲ್ಲಿ ಲೀನರಾದ ವೀರ ಸಾವರ್ಕರರ ಅಚಲ ರಾಷ್ಟ್ರನಿಷ್ಠೆ , ಉಜ್ವಲ ಸನಾತನತೆ ನಮ್ಮ ಜೀವನಕ್ಕೆ ಬೆಳಕಾಗಲಿ.
ಲೇಖಕರಾಗಿ….
- ಮರಾಠಿ ಕೃತಿಗಳಲ್ಲಿ “ಕಮಲಾ”
- “ನನ್ನ ಜೀವಾವಧಿ ಶಿಕ್ಷೆ”
- “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ( ಇದನ್ನು ಬ್ರಿಟಿಷರು ತಮಗನುಕೂಲವಾಗಿ “ಸಿಪಾಯಿ ದಂಗೆ” ಎಂದು ಕರೆದಿದ್ದರು)
- ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಲಾ ಪಾನಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ)
- ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು.
- ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲೊಂದು “ಹಿಂದುತ್ವ”.
ಫೆ.28ಕ್ಕೆ ಕೃತಿ ಲೋಕಾರ್ಪಣೆ
ಸಾವರ್ಕರ್ ಲೇಖನಿಯಿಂದ 20 ಸಾವಿರ ಪುಟಗಳಷ್ಟು ಸಾಹಿತ್ಯ ಉಕ್ಕಿ ಹರಿದಿದೆ.
ಇದೇ 28 ಕ್ಕೆ ಅವರ ಅಂತಿಮ ಕೃತಿ ಲೋಕಾರ್ಪಣೆಯಾಗುತ್ತಿದೆ.
“ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು” ಈ ಕೃತಿಯ ಕನ್ನಡ ಅವತರಣಿಕೆ . ತಮ್ಮ ಇಳಿವಯಸ್ಸಿನಲ್ಲಿ 1963 ರಲ್ಲಿ ಮರಾಠಿಯಲ್ಲಿ ರಚಿಸಿದ ಈ ಕೃತಿ ಈಗಾಗಲೇ ಹಿಂದಿ , ಆಂಗ್ಲ ಮತ್ತಿತರ ಭಾಷೆಗಳಲ್ಲಿ ಬಂದಿದೆ .
ಸಾವರ್ಕರ್ ಕುರಿತ ಕೆಲವು ಪ್ರಶ್ನಾವಳಿ
👉Veer Savarkar is also known as ?
– Father Of Hindutva
👉 When was Veer Savarkar born?
– 28th May 1883
👉 What is the full name of Veer Savarkar?
– Vinayak Damodar savarkar
👉 Who founded the Abhinav Bharat Society in Pune?
– Vinayak Damodar Savarkar
👉 Who called the Quit India Movement struggle (in 1942) as “Quit India but keep your army” movement?
– Vinayak Damodar Savarkar
👉 During his teenage, Veer Savarkar organised a youth organisation, what was it’s name?
– Mitra Mela
👉 On which festival did Veer Savarkar burned all the Foreign goods and clothes?
– Dusshera
👉 In which year Veer Savarkar was elected as the president of the Hindu Mahasabha?
– 1934
👉 Which among the following colleges were joined by Veer Savarkar in London?
– Gray’s Inn
👉 Veer Savarkar was sentenced for how many years in Jail?
– 50
👉 When did Veer Savarkar died?
– 26th February 1966
ಸಂಗ್ರಹ: ಎಮ್ ವೈ ಮೆಣಸಿನಕಾಯಿ