ವಿನಾಯಕ ಕೃಷ್ಣ ಗೋಕಾಕ್
ವಿ ಕೃ ಗೋಕಾಕ್
ಸ್ಥಳ : ಧಾರವಾಡ ಜಿಲ್ಲೆಯ ಸವಣೂರ.
ಜನನ: 9-ಆಗಸ್ಟ್ -1909
ತಂದೆ-ತಾಯಿ: ಕೃಷ್ಣರಾಯ, ಸುಂದರಾಬಾಯಿ
ಕಾವ್ಯನಾಮ: “ವಿನಾಯಕ” (ನವ್ಯತೆಗೆ ಬುನಾದಿ ಹಾಕಿದವರು)
ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.
ನಿಧನ : 28 ಏಪ್ರಿಲ್ 1992 (ವಯಸ್ಸು 82)
ಸಾಹಿತ್ಯಿಕ ಜೀವನ
ಕವನಸಂಕಲನಗಳು: ಲೋಕೋಪಾಸಕ, ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), ತ್ರಿವಿಕ್ರಮ ಆಕಾಶಗಂಗೆ (ಚಂಪೂ ಕೃತಿ), ಸಮುದ್ರ ಗೀತೆಗಳು, ಅಭ್ಯುದಯ, ವಿನಾಯಕರ ಸುನೀತಗಳು, ನವ್ಯ ಕವಿತೆಗಳು, ಉಗಮ, ಚಿಂತನ, ಬಾಳದೇಗುಲದಲ್ಲಿ, ದ್ವಾವಾಪೃಥಿವೀ, ಉರ್ಣನಭ, ಇಂದಲ್ಲ ನಾಳೆ (ಚಂಪು), ಭಾರತಸಿಂಧುರಶ್ಮಿ, ಹಿಗ್ಗು,
ನವ್ಯ ಗೀತೆಗಳು (ಹೊಸ ಛಂದೋ ಮಾರ್ಗಗಳು)
🔹 ಕಾದಂಬರಿಗಳು : ಇಜ್ಜೋಡು, ಸಮರಸವೇ ಜೀವನ, ದಲಿತ ಸಮುದ್ರಯಾನ, ಚೆಲುವಿನ- ನಿಲುವು, ಜೀವನ ಪಾಠಗಳು.
🔶 ಅನುವಾದ : ನೂತನ ಯುಗದ ಪ್ರವಾದಿ
▪️ ನಾಟಕಗಳು: ಜನನಾಯಕ,ಯುಗಾಂತರ, ವಿಮರ್ಶಕ ವೈದ್ಯ, ಮುನಿದ ಮಾರಿ, ಶ್ರೀಮಂತ.
◾️ ವಿಮರ್ಶಾ ಗ್ರಂಥಗಳು : ಸಾಹಿತ್ಯದಲ್ಲಿ ಪ್ರಗತಿ, ನವ್ಯತೆ ಹಾಗು ಕಾವ್ಯಜೀವನ, ವಿಶ್ವಮಾನವ ದೃಷ್ಟಿ ಕವನಗಳಲ್ಲಿ ಸಂಕೀರ್ಣತೆ, ಕವಿ-ಕಾವ್ಯ, ಸೌಂದರ್ಯಮೀಮಾಂಸೆ, ಬೇಂದ್ರೆಯವರ ಕಾವ್ಯ ಗುಣ ಹಾಗೂ ಪ್ರಯೋಗಶೀಲತೆ, ಇಂದಿನ ಕನ್ನಡ ಕಾವ್ಯದ ಗೊತ್ತು – ಗುರಿಗಳು.
◼️ ಪ್ರವಾಸ ಕಥನಗಳು: ಸಮುದ್ರದೀಚೆಯಿಂದ, ಸಮುದ್ರದಾಚೆಯಿಂದ.
⬛️ ಸಂಪಾದನೆ : ವಿಮರ್ಶಾ ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ.
🔳 ಇತರೆ ಕವಿತೆಗಳು: ಅರ್ಪಣಾ ದೃಷ್ಟಿ, ಇಂದಿನ ಕರ್ನಾಟಕ, ಸಪ್ತಸಿಂಧು ದರ್ಶನ, ಸಪ್ತ ರಶ್ಮಿ, ಋಗ್ವೇದದಲ್ಲಿ ಕ್ರಾಂತದೃಷ್ಟಿ.
🔷 ಇಂಗ್ಲಿಷ್ ಕಾವ್ಯಗಳು: ನರಹರಿ, ಪ್ರಾಫೆಟ್ ಆಫ್ ನ್ಯೂ ಇಂಡಿಯಾ, ಇನ್ ಲೈಫ್ ಟೆಂಪಲ್ ಕವನಸಂಕಲನಗಳು, ದಿ ಸಾಂಗ್ ಆಫ್ ಲೈಫ್.
ಪ್ರಶಸ್ತಿಗಳು
🏵 ಜ್ಞಾನಪೀಠ ಪ್ರಶಸ್ತಿ –1990
(ಭಾರತಸಿಂಧುರಶ್ಮಿ )
🏵 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ–1960 (ದ್ವಾವಾಪೃಥಿವಿ)
🏵 ಪದ್ಮಶ್ರೀ ಪ್ರಶಸ್ತಿ –1961
ವಿಶೇಷ ಅಂಶ
❇️ 1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ
(ಯು ಆರ್ ಅನಂತಮೂರ್ತಿ)
ಜನನ: 31- ಡಿಸೆಂಬರ್ – 1932
ಸ್ಥಳ: ಶಿಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರ (ಮೇಳಿಗೆ)
ತಂದೆ-ತಾಯಿ – ರಾಜಗೋಪಾಲಚಾರ್ಯ ಸತ್ಯಭಾಮ.
ವೃತ್ತಿ: ಕೇರಳದ ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಮತ್ತು ಮೈಸೂರು ವಿಶ್ವವಿದ್ಯಾಲಯದ ರೀಡರ್, ಪ್ರಾಧ್ಯಾಪಕರಾಗಿದ್ದರು.
ನಿಧನ : 22- ಅಗಸ್ಟ್- 2014
ಸಾಹಿತ್ಯಿಕ ಜೀವನ
ಕಥಾಸಂಕಲನಗಳು : ಮೂರು ದಶಕದ ಕಥೆಗಳು, ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಆಕಾಶ ಮತ್ತು ಬೆಕ್ಕು, ಮೌನಿ, ನವಿಲುಗಳು, ಸೂರ್ಯನ ಕುದುರೆ, ಕ್ಲಿಪ್ ಜಾಯಿಂಟ್, ಕಾರ್ತಿಕ.
ಕವನಸಂಕಲನಗಳು: ಮಿಥುನ, 15 ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು.
🔹 ವಿಮರ್ಶಾ ಕೃತಿಗಳು : ಬೆತ್ತಲೆ ಪೂಜೆ ಯಾಕೆ ಕೂಡದು, ನವ್ಯ ಲೋಕ, ಸನ್ನಿವೇಶ, ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ, ಸಂಸ್ಕೃತಿ ಮತ್ತು ಅಡಿಗ.
🔹 ನಾಟಕ : ಆವಾಹನ
🔸 ಕಾದಂಬರಿಗಳು: ಭಾರತೀಪುರ, ಅವಸ್ಥೆ, ಬರ, ಘಟಶ್ರಾದ್ಧ, ದಿವ್ಯ, ಸಂಸ್ಕಾರ.
🔸 ಭಾಷಾಂತರ: ಲಾವೋತ್ಸೆಮ ಕವನಗಳು, ದಾವದ್ ಜಿಂಗ್.
ಪ್ರಶಸ್ತಿಗಳು
🏵 ಜ್ಞಾನಪೀಠ ಪ್ರಶಸ್ತಿ —1994 (ಸಮಗ್ರ ಸಾಹಿತ್ಯ) ಪೂರ್ವಾಪರ ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ.
🏵 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ — 1983
🏵 ಮಾಸ್ತಿ ಪ್ರಶಸ್ತಿ — 1994
🏵 ಪದ್ಮಭೂಷಣ ಪ್ರಶಸ್ತಿ — 1998
🏵 ಮಹಮ್ಮದ್ ಬಶೀರ್ ಪ್ರಶಸ್ತಿ — 2011
(ಕೇರಳದ ಪ್ರವಾಸ ಟ್ರಸ್ಟ್ ನ 18ನೇ ಪ್ರಶಸ್ತಿಗೆ ಭಾಜನರಾಗಿದ್ದರು)
🏵 ಬಸವ ಪ್ರಶಸ್ತಿ –2012
ವಿಶೇಷ ಅಂಶಗಳು
1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕನ್ನಡದ ನವ್ಯ ಪರಂಪರೆಯ ಪ್ರಮುಖ ಲೇಖಕರಾಗಿದ್ದರು.
ಇವರ ಬರಹಗಳಾದ : ನಾನು ಹಿಂದೂ, ಮೀಸಲಾತಿ, ತುರ್ತುಪರಿಸ್ಥಿತಿ, ಬ್ರಾಹ್ಮಣ ಮೊದಲಾದ ವಿಷಯಗಳ ಮೇಲೆ ವೈಚಾರಿಕ ವಿವಾದಗಳು ಸೃಷ್ಟಿ ಆಗಿದ್ದವು.
ಇವರ ಕೃತಿಗಳಾದ: ಸಂಸ್ಕಾರ, ಘಟಶ್ರಾದ್ಧ, ಅವನೇ ಮತ್ತು ಅವಸ್ಥೆ ಇವು ಚಲನಚಿತ್ರಗಳಾಗಿವೆ.
ಈ ಚಿತ್ರಗಳಿಂದ ಅನಂತಮೂರ್ತಿಯವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.