ಕವನ: ಅನ್ನದಾತ ಅಯ್ಯೋ ಪಾಪ!

Must Read

ಹೊಲವ ಉಳುವ ರೈತ ಪಾಪ

ಹಲುಬುವಂತೆ ಆಗಿದೆ !!
ತನ್ನ ಕುಣಿಯ ತಾನೇ ತೋಡಿ
ಕೂರೋ ಹಾಗೆ ಮಾಡಿದೆ!!

ಎಲ್ಲ ಜನರ ಹೊಟ್ಟೆ ತುಂಬ್ಸೋ
ಅನ್ನದಾತ ಪ್ರಭು ಇಂವ
ಇವನ ಮನೆಯೆ ಹೊಟ್ಟೆ-ಬಟ್ಟೆ
ಕೊರತೆಯಿಂದ ಕೊರಗಿದೆ!!

ಮಂಜೇ ಇರಲಿ,ಮಳೆಯೆ ಬರಲಿ
ಸಂಜೆವರೆಗೂ ದುಡಿಯುವ
ಗುಟುಕು ಗಂಜಿಗಾಗಿ ಅಂಜಿ
ಜೀವಮಾನ ಸವೆಸುವ!!

ಬಿಸಿಲ ಧಗೆಯ ಬೆವರ ಜಳಕ
ಶ್ರಮಕೆ ಇಲ್ಲ ಸಾರ್ಥಕ
ಶ್ರಮವ ಪಡದೆ ಬೇರೆ ಜನರು
ಮೆರೆಯುತಿಹರು ಸ್ವಾರ್ಥವ!!

ದೇಶದ ಬೆನ್ನೆಲುಬು ಎಂದು
ನುಡಿಯುತಿಹರೆ ಸುಮ್ಮನೆ
ಹೊಗಳಿಕೆಯ ಭಾಷಣವ ಬಿಗಿದು
ಕಟ್ಟಿ ಮಾತಿನರಮನೆ!!

ಹಿಡಿದು ಎತ್ತುವ ಕೈಗಳಿರದೆ
ಕಂಗಾಲಾಗಿ ಕುಳಿತಿದೆ!!
ಮುಗುದ ಮನದ ಶ್ರಮಜೀವಿ
ದಿನವು ಜೀವ ಕೊಡುತಿವೆ!!

✍️ ಕಮಲಾಕ್ಷಿ ಕೌಜಲಗಿ.

Latest News

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ...

More Articles Like This

error: Content is protected !!
Join WhatsApp Group