ಕವನ : ಇದ್ದು ಬಿಡು

Must Read

ಇದ್ದು ಬಿಡು

ನೀನು ಸಾಕು
ನೀನೊಬ್ಬಳೇ ಸಾಕು
ಎತ್ತರದ ಯಶ
ವಿಂಧ್ಯ ಪರ್ವತ ಏರಲು

ನೀನಿದ್ದರೆ ಪಕ್ಕ
ಸ್ವರ್ಗ ಸುಖ
ನೀನಿರದ ವಿರಹ
ನರಕ ಯಾತನೆ

ನಿನ್ನ ಜೊತೆಗೆ ಪಯಣ
ಹೂವು ಹಸಿರು ಕಾನನ
ನೀನಿರದ ಹೆಜ್ಜೆ
ಬರಡು ಮರ ಭೂಮಿ

ನಿನ್ನ ಸ್ನೇಹ ಪ್ರೀತಿ
ಒಲವು ಬಾಳ ರೀತಿ
ನಿನ್ನ ನೆನಪಿನ ಕ್ಷಣ
ನನ್ನ ಜೀವದ ಸ್ಪೂರ್ತಿ

ಇದ್ದು ಬಿಡು ಹೀಗೆ
ನನ್ನಲ್ಲಿ ನನ್ನೊಳಗೆ
ಸದ್ದಿಲ್ಲದೆ ಮೌನದಲಿ
ಕವನ ಕಾವ್ಯ ಭಾವವಾಗಿ

______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group