ಕವನ : ಇದ್ದು ಬಿಡು

Must Read

ಇದ್ದು ಬಿಡು

ನೀನು ಸಾಕು
ನೀನೊಬ್ಬಳೇ ಸಾಕು
ಎತ್ತರದ ಯಶ
ವಿಂಧ್ಯ ಪರ್ವತ ಏರಲು

ನೀನಿದ್ದರೆ ಪಕ್ಕ
ಸ್ವರ್ಗ ಸುಖ
ನೀನಿರದ ವಿರಹ
ನರಕ ಯಾತನೆ

ನಿನ್ನ ಜೊತೆಗೆ ಪಯಣ
ಹೂವು ಹಸಿರು ಕಾನನ
ನೀನಿರದ ಹೆಜ್ಜೆ
ಬರಡು ಮರ ಭೂಮಿ

ನಿನ್ನ ಸ್ನೇಹ ಪ್ರೀತಿ
ಒಲವು ಬಾಳ ರೀತಿ
ನಿನ್ನ ನೆನಪಿನ ಕ್ಷಣ
ನನ್ನ ಜೀವದ ಸ್ಪೂರ್ತಿ

ಇದ್ದು ಬಿಡು ಹೀಗೆ
ನನ್ನಲ್ಲಿ ನನ್ನೊಳಗೆ
ಸದ್ದಿಲ್ಲದೆ ಮೌನದಲಿ
ಕವನ ಕಾವ್ಯ ಭಾವವಾಗಿ

______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group