ಬನ್ನಿರೈ ಬಸವ ಭಕ್ತರೇ
ಬನ್ನಿರೈ ಬಸವ ಭಕ್ತರೇ
ಒಂದಾಗುವ ಬನ್ನಿ
ಸತ್ಯ ಸಮತೆ ಶಾಂತಿ ಪ್ರೀತಿ
ಜಗಕೆ ಸಾರ ಬನ್ನಿ
ಹಸಿದ ಹೊಟ್ಟೆಗೆ
ಅನ್ನವಿಕ್ಕಿ ಬಂಧುವೆನ್ನ ಬನ್ನಿ
ಅರಿವೇ ಗುರು
ಲಿಂಗ ಜಂಗಮ
ದುಡಿಮೆ ಪಾವನ ಎನ್ನಿ
ಬಿಟ್ಟು ಹೋದ ಬಸವ ಭಕ್ತಿ
ಮತ್ತೆ ಮೆರೆಸ ಬನ್ನಿ
ದುಡಿಮೆ ದೇವರು
ಶ್ರಮವೆ ಪೂಜೆ
ಶರಣ ಪಥಕೆ ಬನ್ನಿ
ಬಸವ ಅಲ್ಲಮ ಅಕ್ಕರನ್ನು
ಹೊತ್ತು ನಡೆಯ ಬನ್ನಿ
ವಚನ ಅಸ್ತ್ರ ಗಣಾಚಾರ
ಹೊಸ ಬದುಕ
ಕಟ್ಟ ಬನ್ನಿ
_______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ