spot_img
spot_img

ಕವನ : ಬಿಟ್ಟು ಬಿಡಿ ಬಸವನನ್ನು

Must Read

spot_img
- Advertisement -

ಬಿಟ್ಟು ಬಿಡಿ ಬಸವನನ್ನು 

ಬಿಟ್ಟು ಬಿಡಿ ಬಸವನನ್ನು .
ಕಟ್ಟಿ ಹಾಕಬೇಡಿರಿ.
ಜಾತಿ ಮತ ಕಡಿವಾಣವು
ಗಟ್ಟಿಗೊಂಡಿವೆ ಸಂಕೋಲೆಗಳು
ಬಂಧಿಯಾದ ಧೀರ ಶರಣ
ಮಠ ಆಶ್ರಮ ಮಂಟಪದಿ
ಒಲ್ಲೆನೆಂದ ವಸ್ತ್ರ ಒಡವೆ
ಏಕೆ ಇವರಿಗೆ ಕಿರೀಟವು ?
ಗುಡಿ ಗುಂಡಾರ ಧಿಕ್ಕರಿಸಿದ
ಅವನಿಗೇಕೆ ಮೂರ್ತಿಯು ?
ಭಿಕ್ಷೆ ಎತ್ತುವರು ಧೂಪ ದೀಪದಿ
ಬಸವನೆಸರಲಿ ಉದ್ಯಮ
ಮೌಲ್ಯ ಮೆಟ್ಟಿ ಮೌಢ್ಯ ಬೆಳೆಸಿ
ತತ್ವ ಗೋರಿ ಕಟ್ಟುತಿಹರು.
ಕೊನೆಗೊಳ್ಳಲಿ ಸುಲಿಗೆ ಶೋಷಣೆ
ವೇಷಧಾರಿಯ ಉದರ ಪೋಷಣೆ
ಬಸವ ಸೇನೆ ಎದ್ದು ನಿಂತಿದೆ
ಕ್ರಾಂತಿ ಕಹಳೆ ಮೊಳಗಿದೆ.
ಸತ್ಯ ಸಮತೆ ಶಾಂತ ಮೂರ್ತಿ
ವಿಶ್ವಕೆಲ್ಲ ಬಸವ ಕೀರ್ತಿ
ಬಿಟ್ಟು ಬಿಡಿ ಬಸವನನ್ನು
ಕಟ್ಟಿ ಹಾಕಬೇಡಿರಿ.
ಬಸವ ಮುಕ್ತನಾಗಲಿ
ಲಿಂಗ ತತ್ವ ಮೆರೆಯಲಿ
—————————–
ಡಾ.ಶಶಿಕಾಂತ.ಪಟ್ಟಣ-ಪೂನಾ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group