spot_img
spot_img

ಕವನ

Must Read

spot_img
- Advertisement -

ವಚನಗಳ ತಿಳಿವು

ಶರಣರ ಸ್ವಾನುಭಾವದ
ಘನವು ಬೆರೆತು ಅರಳಿದ
ಮಿತವಾದ ಭಾಷೆ
ರಾಗತಾಳವಿಲ್ಲ ನಮ್ಮ
ಶರಣರ ವಚನಕೆ
ಅದೊಂದು ನಾದಾತೀತ ಯೋಗ

ಅದೊಂದು ಹಾಲತೊರೆ
ಭಾವಾನುಭಾವಗಳ ತೆರೆ
ಅದರಲ್ಲಿಹುದು ಬೆಲ್ಲದ
ಸಿಹಿಯ ಹೊನಲು
ಮಧುರ ಮಧುರ ಜ್ಞಾನದ
ಘಮಲು

- Advertisement -

ಶರಣರ ಅಂತಶ್ಚೇತನದ
ಅಚ್ಚಳಿಯದ ನುಡಿಗಳೇ
ವಚನದ ಕಿಡಿಗಳು
ಅದನು ಅರಿತವನೇ
ನಿಜವಾದ ಶರಣ
ಅಕ್ಷರ ಮಾಂತ್ರಿಕದ
ಮಹಾಶರಣ

ಅದರೊಳಗಿರುವ ಸ್ವರವೆಲ್ಲ
ಪರತತ್ವದ ಪರಾಕಾಷ್ಠೆ
ಭಕ್ತಿರಸ ಹೊರಹೊಮ್ಮುವ
ಪ್ರಸಾದಭರಿತ ಹೊನ್ನ ನುಡಿಗಳು
ವಚನಗಳ ತಿಳಿವಳಿಕೆಯೇ
ನಮ್ಮ ಬಾಳಿನ ಹೆಗ್ಗುರಿ

ಸುಧಾ ಪಾಟೀಲ
ಬೆಳಗಾವಿ

- Advertisement -
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group