ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

Must Read

ಸವದತ್ತಿ – ಈಗ ಮಹಿಳೆಯರಿಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ಸುಖಕರವಾಗಿ ಸಾಗಿಸಬೇಕು ನ್ಯಾಯಾಲಯಗಳಲ್ಲಿ ತಮ್ಮ ವ್ಯಾಜ್ಯಗಳು ಇದ್ದರೆ ಅವುಗಳನ್ನು ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ನ್ಯಾಯಾಧೀಶರಾದ ಸಿ ವೀರಭದ್ರಯ್ಯರವರು ಮಾತನಾಡಿದರು.

ಅವರು ಸವದತ್ತಿಯ ನ್ಯಾಯಾಲಯದ ಆವರಣದಲ್ಲಿನ ನ್ಯಾಯವಾದಿಗಳ ಸಭಾಭವನದಲ್ಲಿ ನ್ಯಾಯವಾದಿಗಳ ಸಂಘದವರು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಭಾರತದ ಅಮೃತ ಮಹೋತ್ಸವ 2021 ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಉಪನ್ಯಾಸಕರಾದ ಮತ್ತು ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಶೈಕ್ಷಣಿಕ ಸದಸ್ಯರಾದ ಲಕ್ಷ್ಮೀ ಮಾ ಆರಿಬೆಂಚಿಯವರು ಮಾತನಾಡಿ, “ಹಿಂದಿನ ನಮ್ಮ ಮಹಿಳೆಯರು ಜನಪದ ಹಾಡುಗಳನ್ನು ಹಾಡುತ್ತ ಕೆಲಸಗಳನ್ನು ಮಾಡುತ್ತಿದ್ದರು.ಅಡುಗೆ ಮನೆಯಿಂದ ಹಿಡಿದು ದಿನನಿತ್ಯದ ಎಲ್ಲ ಚಟುವಟಿಕೆಗಳಲ್ಲಿಯೂ ಜನಪದ ಬದುಕು ಹಾಸು ಹೊಕ್ಕಾಗಿತ್ತು ಹಾಗೂ ಅವರಲ್ಲಿನ ನೈತಿಕತೆ, ಉತ್ತಮ ಸಂಸ್ಕೃತಿ,ಆಚಾರ ವಿಚಾರಗಳು ಅನುಕರಣೀಯ.ಜನಪದರ ಬದುಕನ್ನು ಉಳಿಸಿ ಬೆಳೆಸುವ ಮೂಲಕ ನಮ್ಮತನವನ್ನು ಬೆಳೆಸಬೇಕು ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ನ್ಯಾಯವಾದಿಗಳಾದ ಅನಸೂಯಾ ಕಿಟದಾಳ ರವರು ಮಾತನಾಡಿ, ಈಗಿನ ಮಹಿಳೆಯರು ತಮ್ಮ ಕುಟುಂಬದ ಸಾಕಷ್ಟು ಒತ್ತಡದ ನಡುವೆಯೂ ತಮಗಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿಯೇ ನಿಭಾಯಿಸುತ್ತಿದ್ದಾರೆ. ಇಂದು ಮಹಿಳೆಯರು ಎಲ್ಲ ರಂಗಗಳಲ್ಲೂ ಕೆಲಸ ಮಾಡುತ್ತಿದ್ದು ಮತ್ತು ಕುಟುಂಬದ ಎಲ್ಲ ಏರುಪೇರುಗಳನ್ನು ಎದುರಿಸಿ ಸಾಧಕರಾಗಿ ಹೊರ ಹೊಮ್ಮುತ್ತಿದ್ದಾರೆ. ಈ ಮಹಿಳಾ ದಿನಾಚರಣೆ ಎಂಬುದು ಈ ದಿನಾಚರಣೆಗೆ ಮಾತ್ರ ಸೀಮಿತವಾಗಿರಬಾರದು.ಈಗ ಮಹಿಳೆಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಮಾಡುತ್ತಿರುವುದರಿಂದ ಅವರಿಗೆ ತಮಗಿರುವ ಹಕ್ಕು ಏನು ಎಂದು ತಿಳಿಯುವಂತಾಗುತ್ತಿದೆ” ಎಂದರು
ನಂತರ ನ್ಯಾಯಾಧೀಶೆ ಹೇಮಶ್ರೀಯವರು ಮಾತನಾಡಿ,“ಎಲ್ಲಿ ಮಹಿಳೆಯರಿರುತ್ತಾರೋ ಅಲ್ಲಿ ಸಹನೆ ತಾಳ್ಮೆಯ ಜೊತೆಗೆ ಬಾಂಧವ್ಯದ ವಾತಾವರಣವಿರುತ್ತದೆ.ಮನೆಯೆಂದರೆ ಆ ಮನೆಯಲ್ಲಿ ಹೆಣ್ಣು ಮಗಳಿದ್ದರೆ ಮಾತ್ರ ಆ ಮನೆಯ ವಾತಾವರಣವೇ ಮಾತೃ ಹೃದಯದಿಂದ ಕೂಡಿರುತ್ತದೆ. ಈಗ ಮಹಿಳೆಯರಿಗೆ ಕಾನೂನಿನಲ್ಲಿ ಸಾಕಷ್ಟು ಅನಕೂಲತೆಗಳಿವೆ.ಮಹಿಳೆಯರು ಬರೀ ಹಕ್ಕಿಗಾಗಿ ಹೋರಾಡದೆ ಅದರ ಜೊತೆಯಾಗಿ ನಮ್ಮ ಕರ್ತವ್ಯವೇನು ಎಂಬುವುದರ ಬಗ್ಗೆಯೂ ಗಮನವಿಡಬೇಕು ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ ವ್ಹಿ ಸಾಂಬಯ್ಯನವರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇರೆ ಬೇರೆ ದೇಶಗಳಲ್ಲಿ ಹೆಣ್ಣು ಮಕ್ಕಳಿಗೂ ಕೈ ಕುಲುಕಿ ಮಾತನಾಡುವ ಪದ್ದತಿ ಇದೆ. ಆದರೆ ನಮ್ಮ ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಕೈ ಮುಗಿದು ಗೌರವಿಸುವ ಸಂಸ್ಕಾರವಿದೆ. ಇದು ನಮ್ಮ ಸಂಸ್ಕೃತಿ ಎಂದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಹರೀಶ ಜಿ, ಸರಕಾರಿ ಅಭಿಯೋಜಕಿ ಎಸ್ ಎಮ್ ನಧಾಪ್.ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಪಿ ಎನ್ ಡೊಳ್ಳಿನ,ಪದಾಧಿಕಾರಿಗಳಾದ ಎಸ್ ಎಸ್ ಮಾನೆ ಗಿರಿಜನ್ನವರ ಮೊದಲಾದವರು ಉಪಸ್ಥಿತರಿದ್ದರು.
ನ್ಯಾಯವಾದಿ ಜಯಶ್ರೀ ಪೂಜಾರ ಸ್ವಾಗತಿಸಿದರು.ಎ ಕೆ ಅರವಾಳ. ಅತಿಥಿಗಳ ಪರಿಚಯ ಮಾಡಿದರು ಎನ್ ಎಸ್ ಒಂಟಮೂರಿ ಕಾರ್ಯಕ್ರಮ ನಿರೂಪಿಸಿದರು. ಪಿ ಎಮ್ ಉಪ್ಪಾರ ವಂದಿಸಿದರು.

- Advertisement -
- Advertisement -

Latest News

ಪುಸ್ತಕ ಪರಿಚಯ

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"ಲೇಖಕರು :- ಮುರುಗೇಶ ಸಂಗಮ (೯೪೪೯೪೩೭೬೦೪) ಬೆಲೆ :- ೧೧೦ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group