spot_img
spot_img

ನವರಾತ್ರಿಯ ಮೂರನೇ ದಿನದ ಅವತಾರ; ಚಂದ್ರ ಘಂಟಾ ದೇವಿ

Must Read

- Advertisement -

ನವರಾತ್ರಿಯ ಮೂರನೇ ದಿನದ ಅವತಾರ
ಚಂದ್ರ ಘಂಟಾ ದೇವಿ

ವಧುವಿನಂದದಿ ವಸ್ತ್ರ ಧರಿಸಿದ
ಸುಧೆಯು ಭಕುತರ ತಾಯಿ ಪಾರ್ವತಿ
ನಿಧಿಯು ಶಿವನಿಗೆ ಚಂದ್ರಘಂಟಾ ದೇವಿಗೊಂದಿಪೆನು/
ನಿದಿರೆಯಿಲ್ಲದ ಹಸಿವು ಕಾಣದ
ಮಧುರ ಸಂಗಮಗೊಳುವ ತವಕದಿ
ಮದುವೆ ಕನ್ಯೆಯು ಚಂದ್ರಘಂಟಾ ದೇವಿಗೊಂದಿಪೆನು//೧

ನೈಜ ರೂಪದಿ ಹರನು ಬರುತಿರೆ
ರಾಜಮಾತೆಯು ಮೂರ್ಚೆ ಹೋಗಲು
ರಾಜಪುತ್ರನ ವೇಷದಿಂದಲಿ ಶಿವನು ಕಾಣಿಸಲು/
ಜಾಜಿ ಮಲ್ಲಿಗೆ ಹೂವ ಮುಡಿಯುತ
ತೇಜ‌ ರೂಪದಿ ದೇವಿ ಪಾರ್ವತಿ
ರಾಜವೈಭವದಿಂದ ಮದುವೆಯ ಮಾಡಿಕೊಂಡಿರಲು/೨

ಸುತ್ತ ಕಾಡುವ ದುಷ್ಟರಳಿಸಲು
ಹತ್ತು ಕರಗಳು ಶಸ್ತ್ರ ಸಜ್ಜಿತ
ಮತ್ತೆ ವರವನು ಬೇಡುತಿರುವೆವು ಹರಸು ಚಾಮುಂಡಿ/
ನತ್ತು ಧರಿಸಿಹ ಸಿಂಹ ವಾಹನಿ
ಕುತ್ತು ಬರದಿರಲೆಮ್ಮ ಪೂಜೆಗೆ
ಹೊತ್ತು ಹೊತ್ತಿಗೆ ಚಂದ್ರಘಂಟಾ ದೇವಿಗೊಂದಿಪೆನು//೩

- Advertisement -

ಶ್ರೀಮತಿ ಬಸಮ್ಮ ಏಗನಗೌಡ್ರ ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ ತಾಲೂಕು ಸವಣೂರು ಜಿಲ್ಲೆ ಹಾವೇರಿ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group