- Advertisement -
ನವರಾತ್ರಿಯ ಮೂರನೇ ದಿನದ ಅವತಾರ
ಚಂದ್ರ ಘಂಟಾ ದೇವಿ
ವಧುವಿನಂದದಿ ವಸ್ತ್ರ ಧರಿಸಿದ
ಸುಧೆಯು ಭಕುತರ ತಾಯಿ ಪಾರ್ವತಿ
ನಿಧಿಯು ಶಿವನಿಗೆ ಚಂದ್ರಘಂಟಾ ದೇವಿಗೊಂದಿಪೆನು/
ನಿದಿರೆಯಿಲ್ಲದ ಹಸಿವು ಕಾಣದ
ಮಧುರ ಸಂಗಮಗೊಳುವ ತವಕದಿ
ಮದುವೆ ಕನ್ಯೆಯು ಚಂದ್ರಘಂಟಾ ದೇವಿಗೊಂದಿಪೆನು//೧
ನೈಜ ರೂಪದಿ ಹರನು ಬರುತಿರೆ
ರಾಜಮಾತೆಯು ಮೂರ್ಚೆ ಹೋಗಲು
ರಾಜಪುತ್ರನ ವೇಷದಿಂದಲಿ ಶಿವನು ಕಾಣಿಸಲು/
ಜಾಜಿ ಮಲ್ಲಿಗೆ ಹೂವ ಮುಡಿಯುತ
ತೇಜ ರೂಪದಿ ದೇವಿ ಪಾರ್ವತಿ
ರಾಜವೈಭವದಿಂದ ಮದುವೆಯ ಮಾಡಿಕೊಂಡಿರಲು/೨
ಸುತ್ತ ಕಾಡುವ ದುಷ್ಟರಳಿಸಲು
ಹತ್ತು ಕರಗಳು ಶಸ್ತ್ರ ಸಜ್ಜಿತ
ಮತ್ತೆ ವರವನು ಬೇಡುತಿರುವೆವು ಹರಸು ಚಾಮುಂಡಿ/
ನತ್ತು ಧರಿಸಿಹ ಸಿಂಹ ವಾಹನಿ
ಕುತ್ತು ಬರದಿರಲೆಮ್ಮ ಪೂಜೆಗೆ
ಹೊತ್ತು ಹೊತ್ತಿಗೆ ಚಂದ್ರಘಂಟಾ ದೇವಿಗೊಂದಿಪೆನು//೩
- Advertisement -
ಶ್ರೀಮತಿ ಬಸಮ್ಮ ಏಗನಗೌಡ್ರ ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ ತಾಲೂಕು ಸವಣೂರು ಜಿಲ್ಲೆ ಹಾವೇರಿ