ಮಾಡಿದ ಸಾಲವನ್ನು ಸತ್ಕರ್ಮದಿಂದ ತೀರಿಸಬೇಕು

Must Read

ಭೂಮಿ ಋಣ ತೀರಿಸಲು ಭೂ ತಾಯಿ ಸೇವೆ ಮಾಡಬೇಕು. ದೇಶದ ಋಣ ತೀರಿಸಲು ದೇಶಸೇವೆ ಮಾಡಬೇಕು, ದೇವರ ಋಣ ತೀರಿಸಲು ದೇವರ ಸೇವೆ ಮಾಡಬೇಕು, ತಾಯಿ ಋಣ ತೀರಿಸಲು ತಾಯಿ ಸೇವೆ ಮಾಡಬೇಕು. ಸೇವೆಯಲ್ಲಿ ವ್ಯವಹಾರ ಜ್ಞಾನವಿಲ್ಲವಾದಾಗಲೆ ಋಣ ತೀರೋದು ಎನ್ನುವ ಮಹಾತ್ಮರುಗಳು ನಿಸ್ವಾರ್ಥ, ನಿರಹಂಕಾರ, ನಿರಾವಲಂಬನೆ, ನಿತ್ಯಸತ್ಯ, ನಿರಾಹಾರದಿಂದ ನಿರಾಕಾರ ಬ್ರಹ್ಮನ ಜ್ಞಾನದೆಡೆಗೆ ಅದ್ವೈತ ತತ್ವದ ಪ್ರಕಾರ ನಾನೆಂಬುದಿಲ್ಲ, ನಾನೊಬ್ಬನಲ್ಲ ನನಗಾಗಿಯಲ್ಲ …ಎಂದು ಆಧ್ಯಾತ್ಮದ ಪ್ರಕಾರ ನಡೆದಿರುವಾಗ. ನಾನೇ ಎಲ್ಲಾ ,ನಾನೇ ದೇವರು ನನ್ನಿಂದಲೇ ಭೂಮಿ, ಸ್ತ್ರೀ ಜೀವನವೆನ್ನುವ ಅಹಂಕಾರದ ಜೀವನವನ್ನು ನಾವೀಗ ರಾಜಕೀಯದಲ್ಲಿ ಕಾಣುತ್ತಿದ್ದರೂ ಅದನ್ನು ಸತ್ಯವೆಂದುಸಹಕರಿಸುತ್ತಾ ಮುಂದೆ ನಡೆದ ಜೀವದ ಋಣ ತೀರುವುದೆ? ಹಾಗಾದರೆ ಈಗ ಪ್ರಜೆಗಳು ಏನು ಮಾಡಬೇಕು?

ಸಾಲ ಮಾಡಿದ್ದು ಸಾಕು,ಅದನ್ನು ಸತ್ಕರ್ಮದಿಂದ ಹೇಗೆ ತೀರಿಸಬಹುದು ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ನಮ್ಮ ಹತ್ತಿರವೆ ಇರುವ ಹಣ,ಅಧಿಕಾರ, ಆಸ್ತಿಯನ್ನು ಪರಮಾತ್ಮನ ಸೇವೆಗಾಗಿ ಬಳಸಿಕೊಳ್ಳಲು ಪ್ರಯತ್ನಪಡಬೇಕು. ಹೊಟ್ಟೆ ಬಟ್ಟೆಗಿಲ್ಲದವರಿಗೆ ಊಟ ಕೊಟ್ಟು ಕೆಲಸ ಕೊಡಿ, ಶಿಕ್ಷಣದಿಂದ ಜ್ಞಾನ ತುಂಬಬೇಕಿದೆ. ವಿಜ್ಞಾನ ಮಕ್ಕಳನ್ನು ಭೌತಿಕದೆಡೆಗೆ ಎಳೆದಿದೆ.

ಪಠ್ಯಪುಸ್ತಕದ ವಿಚಾರಗಳು ರಾಜಕೀಯತೆ ಬೆಳೆಸಿದೆ. ರಾಜಯೋಗದ ಶಿಕ್ಷಣದಲ್ಲಿ ಮಕ್ಕಳ ಆಂತರಿಕ ಶಕ್ತಿ ಹೆಚ್ಚಿಸುವ ಕೆಲಸ ಪೋಷಕರೆ ಮನೆಯೊಳಗಿದ್ದು ಮಾಡಬೇಕಿತ್ತು. ತಾಯಿಯೇ ಮೊದಲ ಗುರು,ಮನೆಯೇ ಮೊದಲ ಪಾಠ ಶಾಲೆ ಆಗಬೇಕಿತ್ತು.

ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಮಾಡುವ ಪೋಷಕರು ಮಕ್ಕಳ ಮೇಲೆ ಹಾಕುತ್ತಿರುವ ಸಾಲದ ಹೊರೆ ಇಳಿಸಲು ಸಾಧ್ಯವೆ?

ಸರ್ಕಾರದ ಶಾಲಾ ಕಾಲೇಜುಗಳು ಮುಚ್ಚಿ ಖಾಸಗಿಯವರ ಕೈ ಕೆಳಗೆ ಬಗ್ಗಿ ನಿಂತರೆ ತಲೆ ಎತ್ತಿ ನಡೆಯುವವರು ಯಾರು? ಸಾಲವೇ ಶೂಲ ಎಂದಾಗ ಸರ್ಕಾರದ ಸಾಲದ ಹೊರೆ ಬಡವರ ಮೇಲಿದೆ. ಮಧ್ಯವರ್ತಿಗಳು ತಿಂದು ತೇಗಿ ಮನರಂಜನೆಯ ಜೀವನ ನಡೆಸಿದ್ದರೆ,ಮುಂದಿನ ಜನ್ಮದಲ್ಲಿ ಬಡವರ ಸಾಲಿನಲ್ಲಿ ಜೀವ ಸಿಲುಕಿ ಅವರ ಪರಿಸ್ಥಿತಿ ಅನುಭವಿಸಲೇ ಬೇಕಲ್ಲವೆ ಒಟ್ಟಿನಲ್ಲಿ ಜೀವನದಲ್ಲಿ ಮುಖ್ಯವಾದ ಎರಡು ಪದಕ್ಕೆ ಅರ್ಥ ತಿಳಿದು ನಡೆದರೆ ಸಾಕು.

ಅದು ಆಧ್ಯಾತ್ಮದ ಋಣ ಎಂದರೆ ಭೌತಿಕದ ಸಾಲ. ಇನ್ನೊಂದು ಕರ್ಮ ಎಂದರೆ ಕೆಲಸ. ಮಾಡಿದ್ದುಣ್ಣೋ ಮಹಾರಾಯ ಎಂದರೆ ಭೂಮಿಯ ಮೇಲಿದ್ದು ಮಾಡಿದ‌ ಪ್ರತಿಯೊಂದು ಕರ್ಮಕ್ಕೆ ತಕ್ಕಂತೆ ಋಣ ಬೆಳೆದಾಗ ಅದನ್ನು ತೀರಿಸದೆ ಮುಕ್ತಿ ಯಿಲ್ಲ.

ಇದನ್ನು ಸತ್ಯದಿಂದ, ಸತ್ಕರ್ಮದಿಂದ ಸದಾಚಾರ,ಸ್ವಾವಲಂಬನೆ, ಧರ್ಮ ಮಾರ್ಗದಿಂದ, ಸತ್ಸಂಗದಿಂದ ಸರಳ ಜೀವನದಿಂದ ತೀರಿಸಬಹುದೆನ್ನುವುದೆ ಅಧ್ಯಾತ್ಮ ಸತ್ಯ.

ಹೊರಗಿನ ಸಹಕಾರವೂ ಒಂದು ರೀತಿಯ ಸಾಲವೆ. ಆದರೆ ಧಾರ್ಮಿಕವಾಗಿ ನಡೆಯುವುದಕ್ಕೆ ಉತ್ತಮ ಗುರು ಹಿರಿಯರ ಸಹಕಾರ ಅಗತ್ಯವಿದೆ. ಅದರಲ್ಲಿಯೂ ಶಿಕ್ಷಣದಲ್ಲಿ ಧರ್ಮವಿರಬೇಕು. ಅದೇ ಮಾನವಧರ್ಮ. ಕಲಿಗಾಲದ ಪ್ರಭಾವ ಭೂಮಿಯನ್ನು ಅಧರ್ಮದಿಂದ, ರಾಜಕೀಯದಿಂದ ಆಳಲು ಹೋಗಿ ಇದೇ ಈಗ ಜೀವಕ್ಕೆ ಸಂಚಕಾರ ತಂದಿದೆ.  ಪ್ರಕೃತಿ ವಿಕೋಪ ಪ್ರಕೃತಿ ವಿರುದ್ದ ನಡೆದ ಪ್ರತಿಫಲ. ಇದನ್ನು ಮಕ್ಕಳಿಗೆ ತಿಳಿಸಿ ತಾವೂ ತಿಳಿದು ನಡೆದರೆ ಅನುಭವ ಜ್ಞಾನ ಇದ್ದಲ್ಲಿಯೆ ಸಿಗಬಹುದು.

ಆದರೂ ತುಂಬಾ ದೂರ ನಡೆದವರಿಗೆ ಅಸಾಧ್ಯ ಇನ್ನೂ ನಡೆಯಬೇಕಾದವರಿಗೆ ಸಾಧ್ಯ. ಇದನ್ನು ಭಾರತೀಯತೆ ಎನ್ನಬಹುದು. ಇಡೀ ವಿಶ್ವಕ್ಕೆ ಹೆಸರಾದ ಇದೀಗ ಭಾರತದಲ್ಲಿಯೇ ಹಿಂದುಳಿದಿರುವುದಕ್ಕೆ ಕಾರಣ ನಮ್ಮವರಿಗೆ ಕೊಡದ ಸಹಕಾರ‌
ಪರರಿಗೆ ಕೊಟ್ಟು ವ್ಯವಹಾರ ನಡೆಸಿರೋದು.

ಹಣ, ಅಧಿಕಾರ, ಸ್ಥಾನವನ್ನು ಬಿಡಲಾಗದೆ ರಾಜಕೀಯತೆ ನಡೆಸಿ ಜನರನ್ನು ಆಳಲು ಹೊರಟು ಈಗ ಜನರೆ ತಿರುಗಿ ನಿಂತು ಪ್ರಶ್ನೆ ಮಾಡೋ ಕಾಲ ಬಂದಿದೆ. ಹಾಗಾದರೆ ಇಲ್ಲಿ ತಪ್ಪು ನಡೆದಿರೋದಕ್ಕೆ ಕಾರಣವೆ ನಮ್ಮ ಅಜ್ಞಾನದ ಸಹಕಾರ.ಇದನ್ನು ಸರಿಪಡಿಸಲು ಜ್ಞಾನದ ಶಿಕ್ಷಣದಿಂದ ಸಾಧ್ಯ. ಜ್ಞಾನ ನಮ್ಮೊಳಗಿದೆ. ಸತ್ಯ ನಮ್ಮೊಳಗಿದೆ. ಸತ್ಯವೆ ದೇವರು,ಕಾಯಕವೆ ಕೈಲಾಸ, ಮಂತ್ರ
ದಿಂದ ಮಾವಿನಕಾಯಿ ಉರುಳೋಲ್ಲ ಎಂದು ತಂತ್ರದಿಂದ ಬೀಳಿಸಿ ತಿಂದು ಪೂರ್ಣ ಮರವನ್ನೇ ಯಂತ್ರದಿಂದ
ಕಡಿದು ಹಾಕಿದರೆ ನಷ್ಟ ಯಾರಿಗೆ?

ಯಾರೂ ಸರಿಪಡಿಸಲಾಗದು. ಪ್ರಕೃತಿ ಯೆ ಸರಿಪಡಿಸಲು ಅದರ ಪರ ತಿಳಿದು ನಡೆದರೆ ಉತ್ತಮ ಜೀವನ ಮುಂದಿನ‌ಪೀಳಿಗೆ ಕಾಣಬಹುದೇನೋ. ಭವಿಷ್ಯವನ್ನು ತಿಳಿದವರು ಯಾರು? ನಮ್ಮ ಭವಿಷ್ಯ ನಮ್ಮ ಸಾಲದೊಳಗಿದೆ. ಸತ್ಕರ್ಮದಿಂದ ತೀರಿಸಲು ಸರ್ಕಾರದ ಹಣದ ಅಗತ್ಯವಿಲ್ಲವೆನ್ನುತ್ತಾರೆ ಮಹಾತ್ಮರು. ಇಲ್ಲಿ ಯಾರೂ ಶಾಶ್ವತವಲ್ಲ.ಆತ್ಮ ಶಾಶ್ವತ,ಸತ್ಯ ಶಾಶ್ವತ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಮೂಡಲಗಿಯಲ್ಲಿ ಶಾಸಕರ ನೇತೃತ್ವದಲ್ಲಿ ತಿರಂಗಾ ಯಾತ್ರೆ

ಮೂಡಲಗಿ:- ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಹಿನ್ನೆಲೆ ಮೇ,೨೦ ರಂದು ಮಂಗಳವಾರ,ಸಂಜೆ ೪ ಗಂಟೆಗೆ ಮೂಡಲಗಿ ಪಟ್ಟಣದಲ್ಲಿ  ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ತಿರಂಗಾ ಯಾತ್ರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group