ಮೋದೀಜಿಗೊಂದು ಪತ್ರ

Must Read

( ಮೋದಿಯವರಿಗೆ ರಿಪಬ್ಲಿಕ್ ಟಿವಿಯ ಆರ್ನಾಬ್ ಗೋಸ್ವಾಮಿ ಬರೆದಿರುವ ಇಂಗ್ಲೀಷ ಲೇಖನದ ಅನುವಾದ ನಿಮಗಾಗಿ )

ಆತ್ಮೀಯ ಪ್ರಧಾನಿ,

ನಿಮ್ಮಂತಹ ಒಬ್ಬ ವ್ಯಕ್ತಿಯಿಂದ ಈ ದೇಶ ನಡೆಸಿಕೊಳ್ಳಲು ಅರ್ಹವಾಗಿಲ್ಲ. ದೇಶದ ಜನಸಂಖ್ಯೆಯ ಪ್ರಮುಖ ಭಾಗವು ನಿಮ್ಮ ಕೆಲಸವನ್ನು ನೋಡುತ್ತಿಲ್ಲ. ದಿನಕ್ಕೆ 16 ಗಂಟೆಗಳಿಗೂ ಹೆಚ್ಚು ಕಾಲ ನೀವು ಕೆಲಸ ಮಾಡುತ್ತಿದ್ದೀರಿ . ಈ ದೇಶದ ಸುಧಾರಣೆಗಾಗಿ ನಿಮ್ಮ ನಿದ್ರೆಯನ್ನು ತ್ಯಾಗ ಮಾಡುತ್ತಿದ್ದೀರಿ. ಆದರೆ ನೀವು ಅದೇ ರೀತಿಯ ಮೆಚ್ಚುಗೆಯನ್ನು ಅವರಿಂದ ಪಡೆಯುತ್ತಿಲ್ಲ. ಸಣ್ಣ ಸಣ್ಣ ಸಮಸ್ಯೆಗಳಿಗೆ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಈ ಜನರು ಕಳೆದ 60 ವರ್ಷಗಳಿಂದ ಇಡೀ ದೇಶವನ್ನು ಒಂದು ಕುಟುಂಬಕ್ಕೆ ಹಸ್ತಾಂತರಿಸಿ ಗುಲಾಮರಾಗಲು ಬಯಸುತ್ತಾರೆಯೆ ಹೊರತು ಐದು ವರ್ಷ ಉತ್ತಮ ಆಡಳಿತ ಕೊಡುವ ಸರ್ಕಾರವನ್ನು ನೋಡಲು ಇಷ್ಟಪಡುವುದಿಲ್ಲ.

ಈ ಕಾರಣದಿಂದ, ಈ ದೇಶವು ನಕಲಿ ಹುಸಿ ಬುದ್ಧಿಜೀವಿಗಳು, ಆಸೆಬುರುಕ ಮತ್ತು ಸೋಮಾರಿಯಾದ ಮನುಷ್ಯರಿಂದ ತುಂಬಿದೆ. ಇವರಿಗೆ ನಾಲ್ಕು ಜನರಿರುವ ತಮ್ಮ ಸಣ್ಣ ಕುಟುಂಬವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ಒಬ್ಬ ಪ್ರಧಾನಿಯಾದವನು ಈ ರಾಷ್ಟ್ರವನ್ನು ಹೇಗೆ ಚಲಾಯಿಸಬೇಕು ಎಂಬುದರ ಕುರಿತು ಖಂಡಿತವಾಗಿ ನಿಮಗೆ ಸಲಹೆ ನೀಡುತ್ತಾರೆ. ವಾಹ್ ! ಎಂಥಾ ದೇಶ ನಮ್ಮದು !

ನಮ್ಮ ದೇಶದ ಪ್ರಧಾನಮಂತ್ರಿಗಳು ವಿಶ್ವದಲ್ಲಿಯೆ ಅತ್ಯಂತ ದೊಡ್ಡ ಅಪಾಯಕಾರಿ ಅಪರಾಧವನ್ನು ಮಾಡಿದ್ದಾರೆ ಎನ್ನುವಂತೆ ದೇಶದ ಜನರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಬಿಹಾರದ ಫಲಿತಾಂಶಗಳನ್ನು ನೋಡಿ . ಅವರು 8, 9 ಮತ್ತು 12 ನೇ ತರಗತಿಯನ್ನೂ ಪಾಸ್ ಮಾಡದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ . ಆದರೆ ನಿಮ್ಮನ್ನು ಹಿಯಾಳಿಸಿದವರು ಇವರೇ ಅಲ್ಲವೆ ? ಯಾಕೆ ನಿಮ್ಮ ರಾಷ್ಟ್ರದ ಸುಧಾರಣೆಗಾಗಿ ತುಂಬಾ ಶ್ರಮವಹಿಸಿದ ನಂತರವೂ ನಿಮ್ಮ ನಿಷ್ಠಾವಂತ ಅಭಿಮಾನಿಗೆ ಅಥವಾ ದೇಶದ ಕೆಲಸ ಮಾಡುವವರನ್ನು ಪ್ರೀತಿಸುವವರಿಗೆ ಇದನ್ನು ತಡೆದುಕೊಳ್ಳಲು ಹೇಗೆ ಸಾದ್ಯ ?

ನಮ್ಮ ದೇಶವು ಆತ್ಮ ಗೌರವದಿಂದ ಸ್ವಾಭಿಮಾನದಿಂದ ವಿಶ್ವದೇದುರು ತಲೆ ಎತ್ತಿ ನಿಲ್ಲುತಿದೆ ಎಂಬ ಅಂಶವನ್ನು ಅವರು ಒಪ್ಪಿಕೊಳ್ಳಲು ಸಾಧ್ಯವಿಲ್ಲ . ದೇಶವು ಪ್ರತಿಯೊಂದು ಹಂತದಲ್ಲಿಯೂ ಮುಂದುವರೆಯುತ್ತಿದೆ ಎಂದರೂ , ಅವರು ಇದನ್ನು ಬಯಸುವುದಿಲ್ಲ . ಅವರು ಕೆ.ಜಿ. ಈರುಳ್ಳಿಗೆ ಮೂರು ರೂಪಾಯಿ‌ ಬಯಸಿ ಓಟು ಹಾಕುತ್ತಾರೆಯೇ ಹೊರತು ಪ್ರಾಮಾಣಿಕತೆಗೆ ಬೆಲೆ‌ ಇಲ್ಲ. ಸಾಲ ಮನ್ನಾ ಬಯಸುತ್ತಾರೆಯೇ ಹೊರತು ಪ್ರೋತ್ಸಾಹ ಉತ್ತೇಜನ ಬಯಸಲಾರರು. ಈ ದೇಶದಲ್ಲಿನ ಭ್ರಷ್ಟಾಚಾರಕ್ಕೆ ಜನರು ಒಗ್ಗಿಕೊಂಡಿದ್ದಾರೆ ಮತ್ತು ದೇಶವು ಸರಿ ದಾರಿಗೆ ಹೋಗುವ ವಿಧಾನ ಮತ್ತು ಧನಾತ್ಮಕ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಇವರಿಂದ ಸಾಧ್ಯವಿಲ್ಲ.

ನಾನು ದುಃಖಿತನಾಗಿದ್ದೇನೆ ಆದರೆ ಖಚಿತವಾಗಿರುತ್ತೇನೆ . 2019 ರಲ್ಲಿ ನಾವು ನಿಮ್ಮನ್ನು ನೋಡಲು ಸಾಧ್ಯವಾಗುವುದಿಲ್ಲವೇನೊ‌ ಎನಿಸುತ್ತಿದೆ . ಏಕೆಂದರೆ ಅವರು ರಾಕೆಟ್ ವೇಗದಲ್ಲಿ ಅಭಿವೃದ್ದಿ ಮಾಡಲು ಪಪ್ಪುಜಿ ( ರಾಹುಲ್ ಗಾಂಧಿ ) ಅವರನ್ನು ಆಯ್ಕೆ ಮಾಡುತ್ತಾರೆ !

ಜನರು ಬೇಳೆ, ಅಕ್ಕಿ ಮತ್ತು ಆಲೂಗಡ್ಡೆಗಳನ್ನು ಉಚಿತವಾಗಿ ಒದಗಿಸುವ ವ್ಯಕ್ತಿಯ ಗುಲಾಮರಾಗುತ್ತಾರೆ .

ನಮ್ಮ ದೇಶದ ಇತಿಹಾಸ ಹಾಗೆ‌ ಅಲ್ಲವೆ ? ಯಾರು ದೇಶವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೊ ದೇಶದ ಜನರು ಅವರನ್ನೆ ಬದಲಾಯಿಸಲು ಪ್ರಯತ್ನಿಸುತ್ತಾರೆ. ಇದು ನಮ್ಮ ನರಸತ್ತ ಪ್ರಜೆಗಳ ಇತಿಹಾಸದಿಂದ ಕಲಿತ ಪಾಠ.

ಸ್ಮಾರ್ಟ್ ಫೋನ್ಗಳಲ್ಲಿ 4 ಜಿ ಪ್ಯಾಕೇಜ್ ಹಾಕಿಸಿಕೊಂಡು ” ಬಢತಿ ಮೆಹಂಗಾಯಿಯ” ( ಬೆಲೆ ಏರಿಕೆ ) ಬಗ್ಗೆ ಮಾತನಾಡುತ್ತಾರೆ .

ಸರ್, ಪ್ರಪಂಚದ ಅಗ್ರ ಹತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿದ್ದೀರಿ. ಅದು ಈ ದೇಶದ ಜನರಿಗೆ ಹೆಮ್ಮೆಯ ವಿಷಯವಲ್ಲ. ಇಲ್ಲಿ ಹೆಚ್ಚಿನ ಜನರು ಕಿವಿಯಿದ್ದೂ ಕಿವುಡರು ಮತ್ತು ಕಣ್ಣಿದ್ದೂ ಕುರುಡರು.

ನೀವು ಈ ವಯಸ್ಸಿನಲ್ಲಿ ವಿಶ್ರಾಂತಿ ಪಡೆಯಬೇಕು. ಮತ್ತು ಜೀವನವನ್ನು ಆನಂದಿಸಬೇಕು. ನಿಮ್ಮ ಹಾರ್ಡ್ ಕೆಲಸಕ್ಕೆ ಇಲ್ಲಿ ಬೆಲೆ ಇಲ್ಲ. ಜಾತಿ, ಹಣ ಮತ್ತು ಭ್ರಷ್ಟಾಚಾರಕ್ಕೆ ಇಲ್ಲಿ ಬೆಲೆಯೆ ಹೊರತು ಬದ್ಧತೆ ಮತ್ತು ಸಮರ್ಪಣೆಗೆ ಇಲ್ಲಿ ಬೆಲೆಯಿಲ್ಲ . ಮತ್ತೊಮ್ಮೆ ಹೇಳುತ್ತಿದ್ದೇನೆ ದಣಿವರಿಯದ ನಾಯಕನಿಂದ ಈ ದೇಶ ನಡೆಸಲು ಯೋಗ್ಯತೆ ಗಳಿಸಿಲ್ಲ.

ಜೈ ಹಿಂದ್.
– ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ.
( ಕನ್ನಡಾನುವಾದ ; ಎನ್ ವಿ ದಾತಾರ )

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group