spot_img
spot_img

ಯೋಗಮೂರ್ತಿ ತಾತಯ್ಯನವರು

Must Read

spot_img

ಯೋಗಮೂರ್ತಿ ತಾತಯ್ಯನವರು

- Advertisement -

ಧರೆಯ ಜನರ ಭವಬಂಧನ ಬಿಡಿಸಲೆಂದೇ ,
ಇಳೆಗವತರಿಸಿದ ಕಲಿಯುಗದ ಕಾಮಧೇನು
ತಾತಯ್ಯನೆಂಬ ನಾಮಾಂಕಿತ ಸಚ್ಚಿದಾನಂದ ಗುರುವರ್ಯರು/1/

ಕೈವಾರವೆಂಬ ವಸುಂಧರೆಯ ಪುಣ್ಯಕ್ಷೇತ್ರದಿ ,
ಬಳೆಗಾರ ದಂಪತಿಯ ಪುಣ್ಯಗರ್ಭೋತ್ಸವದಿ
ಉದಯಿಸಿತು ಭವ್ಯ ಉಜ್ವಲಮೂರ್ತಿ,
ಪ್ರಕಾಶಿಸಿತು  ಭರತಭೂಮಿಯ ಕಾರುಣ್ಯಮೂರ್ತಿ /2/

ಜಗದ ಜಂಜಡದಲಿ ಸಿಲುಕಿ
ಬಳಲಿ ಬೆಂಡಾದ  ನಿಮ್ಮ ಜೀವಕೆ ,
ಸಂಜೀವಿನಿಯಾಗಿ ದೊರೆತ ಗುರುವಿನ ಮಾರ್ಗದರ್ಶನ
ಬೆಳಗಿತು ನಿಮ್ಮ  ಅಂತರಂಗದ ಆತ್ಮಜ್ಯೋತಿ. /3/

- Advertisement -

ಇಂದ್ರಿಯಗಳಿಗೆ ಮನಸೋಲುವ ಭವಿಗಳಿಗೆ
ಯೋಗದ ಚಿರತತ್ವವ ಉಣಬಡಿಸಿ,
ಸುಖೀ ಆರೋಗ್ಯ ಸಾರಿದ ಮಹಾಮಹಿಮ ಯೋಗಬ್ರಹ್ಮರು/4/

ಬದುಕಿನ ನಿಜಸಾರವ ತಿಳಿಸುವ ತತ್ವಪದಗಳ ಸಂತರು
ಬೆಣಚುಕಲ್ಲು ಸಕ್ಕರೆ ಮಾಡಿದ ಗಂಗೆಯ ಅವತರಿಸಿದ  ಪವಾಡಪುರುಷರು,
ನಾರಾಯಣನೆಂಬ ನಿಮ್ಮ  ನಾಮ
ನೆಲೆಸಿತು ಧರಿತ್ರಿಯಲಿ ನಿತ್ಯ ನೂತನ ನಿರಂತರ /5/

ಸಜ್ಜನಸಾಂಗತ್ಯ ಇಂದ್ರಿಯನಿಗ್ರಹ
ಇವು ನಿಮ್ಮ ಮಂತ್ರಗಳು
ದೇಹ ಆತ್ಮ ಒಂದೇ ಎಂದು ಸಾರಿದ ಸರ್ವೋತ್ತಮರು
ಪರೋಪಕಾರವೇ ಭುವಿಯ ಮೇಲಿನ ನಿಜವಾದ ಧರ್ಮ
ಅದ ಸಾರಿ ಸಾರಿ ಹೇಳಿದ ಪುಣ್ಯ ಪುರುಷರು/6/

- Advertisement -

ನೀವು ಜಗದ ಸೌಂದರ್ಯ ಶಿಖಾಮಣಿ , ನಿಮ್ಮ ಆಶೀರ್ವಾದ ಸದಾ ಬೇಡುತ
ಭವಬಂಧನ ಬಿಡಿಸಿ ಈ ಪೃಥ್ವಿ ಬೆಳಗಲು
ಮತ್ತೊಮ್ಮೆ ಅವತರಿಸಿ ಬನ್ನಿ
ಮತ್ತೊಮ್ಮೆ ಅವತರಿಸಿ ಬನ್ನಿ  /7/


ಶಿವಕುಮಾರ 
ಕನ್ನಡ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿ ಜಿ ಬೆಳಗಾವಿ (591312)
ಮೊಬೈಲ್ ಸಂಖ್ಯೆ:- 9880735257


( ಶಿವಕುಮಾರ ಅವರ ಈ ಮೇಲಿನ ಕವಿತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕೈವಾರ ತಾತಯ್ಯನವರನ್ನು ಕುರಿತ ರಾಷ್ಟ್ರ ಮಟ್ಟದ ಕವನ ಸ್ಪರ್ಧೆಯಲ್ಲಿ ” ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರ ಪ್ರಶಸ್ತಿ ” ಪಡೆದುಕೊಂಡಿದೆ. )

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group