Homeಸುದ್ದಿಗಳುಶರಣ ಶರಣೆಯರೆಲ್ಲರಿಗೂ ಶರಣು ಶರಣಾರ್ಥಿಗಳು 🙏🙏🙏🙏

ಶರಣ ಶರಣೆಯರೆಲ್ಲರಿಗೂ ಶರಣು ಶರಣಾರ್ಥಿಗಳು 🙏🙏🙏🙏

ಹನ್ನೆರಡನೆ ಶತಮಾನದ ಶಿವಶರಣರು ರಚಿಸಿದ ವಚನ ಸಾಹಿತ್ಯವು ಶರಣರ ಅನುಭವದ ನುಡಿಗಳು ಜೀವನದ ಸಹಜ ಘಟನೆಗಳನ್ನು ಅತ್ಯಂತ ಅಥ೯ಪೂಣ೯ವಾಗಿ ಹೇಳಿದ ಶರಣರ ಮಾತುಗಳೇ ಇಂದು ವಚನಗಳಾಗಿವೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ,ಬದ್ಧತೆಯ ಬದುಕು ನಿವ೯ಹಿಸಿದ 12 ನೇ ಶತಮಾನದ ಶರಣರ ನಡೆ ನುಡಿ ಒಂದಾಗಿದ್ದವು. ಈ ಕಾರಣಕ್ಕೆ 13 ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಶತಮಾನವಾಗಿದೆ.

ಜಾತಿ,ಮತ,ಪಂಥ,ಮೇಲು,ಕೀಳು ಎನ್ನದೆ ಕಾಯಕ ಮಾಡಿದವರು. ಇಂತಹ ಶರಣರ ತತ್ತ್ವಾದಶ೯ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೂಂಡು ಬಾಳಬೇಕು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಮೂಲಕ ಬಸವಾದಿ ಶರಣರು ವಿಶ್ವಕ್ಕೆ ಹೊಸ ಹೊಸ ಸಂದೇಶ ನೀಡಿದರು.
ಸಾಂಪ್ರದಾಯಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರನ್ನು ಶರಣರನ್ನು ಹಾಗೂ ಅವರ ವಚನಗಳನ್ನು ನೆನೆಯುವುದು, ವಾಚನ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಸಿ.ಬಿ.ಸೋಮಶೆಟ್ಟಿ ಎಂಬ ರೇಖಾಚಿತ್ರ ಕಲಾವಿದರು ಕಟ್ಟಿ ಕೊಟ್ಟಿರುವ ಶರಣರ ವಚನಗಳನ್ನು ಸವಿಯೋಣ ಬನ್ನಿ.

ಸಂಗ್ರಹ: ಎಂ ವೈ ಮೆಣಸಿನಕಾಯಿ

RELATED ARTICLES

Most Popular

close
error: Content is protected !!
Join WhatsApp Group