spot_img
spot_img

ಕವನ: ಅನ್ನದಾತ ಅಯ್ಯೋ ಪಾಪ!

Must Read

- Advertisement -

ಹೊಲವ ಉಳುವ ರೈತ ಪಾಪ

ಹಲುಬುವಂತೆ ಆಗಿದೆ !!
ತನ್ನ ಕುಣಿಯ ತಾನೇ ತೋಡಿ
ಕೂರೋ ಹಾಗೆ ಮಾಡಿದೆ!!

ಎಲ್ಲ ಜನರ ಹೊಟ್ಟೆ ತುಂಬ್ಸೋ
ಅನ್ನದಾತ ಪ್ರಭು ಇಂವ
ಇವನ ಮನೆಯೆ ಹೊಟ್ಟೆ-ಬಟ್ಟೆ
ಕೊರತೆಯಿಂದ ಕೊರಗಿದೆ!!

- Advertisement -

ಮಂಜೇ ಇರಲಿ,ಮಳೆಯೆ ಬರಲಿ
ಸಂಜೆವರೆಗೂ ದುಡಿಯುವ
ಗುಟುಕು ಗಂಜಿಗಾಗಿ ಅಂಜಿ
ಜೀವಮಾನ ಸವೆಸುವ!!

ಬಿಸಿಲ ಧಗೆಯ ಬೆವರ ಜಳಕ
ಶ್ರಮಕೆ ಇಲ್ಲ ಸಾರ್ಥಕ
ಶ್ರಮವ ಪಡದೆ ಬೇರೆ ಜನರು
ಮೆರೆಯುತಿಹರು ಸ್ವಾರ್ಥವ!!

ದೇಶದ ಬೆನ್ನೆಲುಬು ಎಂದು
ನುಡಿಯುತಿಹರೆ ಸುಮ್ಮನೆ
ಹೊಗಳಿಕೆಯ ಭಾಷಣವ ಬಿಗಿದು
ಕಟ್ಟಿ ಮಾತಿನರಮನೆ!!

- Advertisement -

ಹಿಡಿದು ಎತ್ತುವ ಕೈಗಳಿರದೆ
ಕಂಗಾಲಾಗಿ ಕುಳಿತಿದೆ!!
ಮುಗುದ ಮನದ ಶ್ರಮಜೀವಿ
ದಿನವು ಜೀವ ಕೊಡುತಿವೆ!!

✍️ ಕಮಲಾಕ್ಷಿ ಕೌಜಲಗಿ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group