spot_img
spot_img

ಕವನ: ಕನಕ ಕೃಷ್ಣರ ಒಗೆತನ

Must Read

- Advertisement -

ಕನಕ ಕೃಷ್ಣರ ಒಗೆತನ

ಕೃಷ್ಣ ಗೊಲ್ಲ ಕನಕ ಕುರುಬ

ಗೋವುಗಳಿಗೆ ಕೃಷ್ಣನ ಕೊಳಲೆಂದರೆ ಜೀವ
ಕುರಿಗಳಿಗೆ ಕನಕನ ಹಾಡುಗಳೆಂದರೆ ಪ್ರಾಣ
ಒಗೆತನಕೆ ಭೇದವಿಲ್ಲ ಭಕ್ತಿಗೆ ಕುಂದಿಲ್ಲ

ಕನಕ ಕೋಣಮಂತ್ರ ಜಪಿಸಿ
ಹೆಬ್ಬಂಡೆ ಸರಿಸಿ ವ್ಯಾಸರಾಯರ ಪ್ರೀತಿಪಾತ್ರನಾದ
ಕೃಷ್ಣ ಗುರುಗಳ
ಕಳೆದು ಹೋದ ಸಂತಾನವ ಮರಳಿಸಿ ಸಾಂದಿಪನಿ ಗುರುಗಳ ಪ್ರಿಯನಾದ
ಭಕ್ತಿಗೆ ಕುಂದಿಲ್ಲ

- Advertisement -

ಕನಕ ಭಕ್ತಿಯಿಂದ ಹಾಡಿದ
ಕೃಷ್ಣ ಪಶ್ಚಿಮದಿ ತಿರುಗಿ
ಅವಗೆ ದಶ೯ನ ಕೊಟ್ಟ
ಭಕ್ತಿಗೆ ಕುಂದಿಲ್ಲ
ಕನಕ ರಾಯರಿಗೆ ಸಾಸಿವೆ ಕೊಟ್ಟ
ಕೃಷ್ಣನ ನೈವೇದ್ಯಕೆ ಗಂಜಿ ಕೊಟ್ಟ
ಕೃಷ್ಣ ಪ್ರೀತನಾದ
ಭಕ್ತಿಗೆ ಕುಂದಿಲ್ಲ

ಕುಲ ಕುಲ ಕುಲವೆಂದು
ದೂರದಿರೋಣ
ಕನಕನಂತೆ ಭಕ್ತಿಗೈದು
ಭಗವಂತನ ಒಲಿಸೋಣ.

- Advertisement -

ರಾಧಾ ಶಾಮರಾವ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group