- Advertisement -
ನೀಲಿಗಗನದಲಿ…
ನೀಲಿಗಗನದಲಿ ನಾಡ ಶಕ್ತಿಯದೋ…..
ನುಡಿಯುತಿದೆ : //ಪ//
ಸಾರ್ವಭೌಮ ತನ್ನ ಗುರಿಯೆಂದು
ಕೇಸರಿ , ಬಿಳಿ, ಹಸಿರು ಮೂರು
ತನ್ನ ಭಾತೃತ್ವದ ಪ್ರತೀಕವೆಂದು……!! //ಪ//
ಮೇಲು- ಕೀಳು , ಬಡವ – ಬಲ್ಲಿದ
ಜಾತಿ – ಪಂಥ , ಪಂಗಡಗಳಿಗೆಲ್ಲಾ ಒಂದೇ ವಿಧಿಯಂದು
ಹಕ್ಕೊಂದೇ ಸಲ್ಲದು
ಕರ್ತವ್ಯ ಪರಮ ಧ್ಯೇಯವೆಂದು !! //ಪ//
- Advertisement -
ಹಿಂದೂ ಮಹಾಸಾಗರದ ಭೂಶಿರವು
ಕಾಶ್ಮೀರದ ಮುಕುಟವು ಅಖಂಡ ಭೂಪಟವೆಂದು
ದೇಶವಾಸಿಗಳಿಗೆಲ್ಲ ಒಂದೇ ಧರ್ಮ
ಒಂದೇ ಕುಲ ಒಂದೇ ಗೋತ್ರ – ಅದುವೇ ಭಾರತವೆಂದು ……!! //ಪ//
ವೃತ್ತಾಕಾರದ ಚಕ್ರವು ಸಾರುತಿದೆ
ಅಲಗಿನ ಹೆಜ್ಜೆಯು ಪ್ರಗತಿಯ ಚಿನ್ಹೆಯು
ಎಲ್ಲರ ಕೈಗಳು ಊರುಗೋಲಾಗಲಿಯೆಂದು …..!!
ಜೇನ್ನೊಣದ ಹಾಗೆ ” ಒಂದಾಗಿ ”
ಭಗೀರಥ ಪ್ರಯತ್ನದ ಹಾಗೆ ಮುಂದಾಗಿ
ನೆಲದ ನೀತಿಗೆ ಬದ್ದರಾಗಿರೆಂದು ನುಡಿಯುತಿದೆ.
ನೀಲಿಗಗನದಲಿ ನಾಡ ಶಕ್ತಿಯು
ನೀಲಿಗಗನದಲಿ ನಾಡ ಶಕ್ತಿಯು
- Advertisement -
ಯಮುನಾ.ಕಂಬಾರ
ರಾಮದುರ್ಗ