spot_img
spot_img

ಕವನ: ಸಖಿ

Must Read

- Advertisement -

ಸಖಿ

ಬಾರೆ ಬಾ ನೀ ಎನ್ನ ಸಖಿ
ನೀನಿದ್ದರೆ ಬಾಳು ಹಸನ್ಮುಖಿ
ಬಂದು ಎನ್ನೆದೆಯ ತುಂಬು ಪ್ರಿಯತಮೆ
ನೀ ನನಗಾಗ ಬೇಡ ಗಗನ ಕುಸುಮ

ಇಬ್ಬರಲಿ ತುಂಬಿಕೊಂಡಿರುವ ನೂರೆಂಟು ಆಸೆಗಳು
ಮನಬಿಚ್ಚಿ ಗರಿಗೆದರಿ ಬಾನಂಗಳಕೆ ಜಿಗಿಯಲು
ನನ್ನಾಸೆ ನಿನ್ನಾಸೆ ಬೆಸೆಯಲು ಬಾಂದಳಕೆ ಸುಂದರ
ಬಿಡಿಸೋಣ ಬಣ್ಣ ಬಣ್ಣ ಏಳು ಬಣ್ಣಗಳ ಚಿತ್ತಾರ.

ಏಳೇಳು ಜನ್ಮಕೆ ಬಿಡದ ಗಂಟಿನ ನಂಟು
ಬಂಧನದಲಿ ಸುಡು ಭಾವ ಪರವಶೆ ಎನಗುಂಟು
ಶ್ರೇಷ್ಠತೆ ಹಾದಿ ಸವಿಯುತಾ ಸಾಧಿಸೋಣ
ಭವಿತಕೆ ಲಾಲಿತ್ಶದ ಭಾಷೆ ಬರೆಯೋಣ

- Advertisement -

ನಮ್ಮೊಲವಿನ ಕವನಗಳ ಇಂಚರಕೆ
ಮೈದುಂಬಿ ತೊನೆಯೋಣ ಹೂ ಗೊಂಚಲಂತೆ
ಜಗವೆಲ್ಲ ಮಾಧುರ್ಯ ತುಂಬಿ ಬರುವಂತೆ
ಇರಲಿ ನಮ್ಮಿಬ್ಬರ ಬಾಳು ಜೇನ ಹನಿಯಂತೆ

ಪ್ರಕೃತಿ ಮಡಿಲ ಮಿತಿಯಲಿ ಗೂಡೊಂದು ಕಟ್ಟೋಣ
ಪೋಷಿಸಿ ಬೆಳೆಸಲು ನಮ್ಮಭಿಲಾಷೆಯ ಕಂದಮ್ಮಗಳನು
ನಿರ್ಮಲ ಬದುಕಿನೆಡೆ ನಿರ್ಭೀತದಿಂದ ಹಾರಲು ಕಲಿಸೋಣ
ಅವರಂದದ ಭವಿಷ್ಶಕೆ ಇಂಬಾಗೋಣ
ಸಖಿ,ಯಾವ ಫಲಾಪೇಕ್ಷೆ ಇಲ್ಲದೆ ಬದುಕೋಣ.


ಅಮರ್ಜಾ
ಅಮರೇಗೌಡ ಪಾಟೀಲ
ಬುಬನ, ಕುಷ್ಟಗಿ
9900504639

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group