spot_img
spot_img

ಕವನ

Must Read

- Advertisement -

( ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯಾಚಾರಕ್ಕೊಳಗಾದ ಮನಿಷಾ ಎಂಬ ಬಾಲಕಿಯ ಕುರಿತು ಶರಶ್ಚಂದ್ರ ತಳ್ಳಿ ಕವನ )

ಮನಿಷಾ! ಮುಂದಿನ ಜನುಮಗಳಲಿ…?

ನಿನ್ನ ದೇಹವು
ಕತ್ತಲೆಯ ಚಾಪೆಯಾಗುತ್ತದೆ
ಎಂದೆನಿಸಿದಾಗ-
ಅವರ ಕೊರಳ ಕೊಳವೆ ಕಡಿಬೇಕಿತ್ತು

- Advertisement -

ನಿನ್ನ ಚಿತೆಯ ಬೆಂಕಿ
ಕೆನ್ನಾಲಿಗೆ ಚಾಚುತಿದೆ
ಎಂದೆನಿಸಿದಾಗ-
ಕೈಗೆ ಸಿಕ್ಕ ಕಲ್ಲಿನಲಿ
ಹಲ್ಲಿಗೆ ಜಜ್ಜಬೇಕಿತ್ತು

ಮನಿಷಾ!ನಿನ್ನೆದೆಗೂಡನು
ಕುಲುಮೆಯಲಿ ಬೇಯಿಸುತ್ತಾರೆ
ಎಂದೆನಿಸಿದಾಗ-
ಪೆನ್ನನು ಆಯುಧ ಮಾಡಿ,
ಒಂದಿಬ್ಬರ ಕಣ್ಣಿಗಿರಿಯಬೇಕಿತ್ತು

ನಿನ್ನ ಜೀವದ ಕಥೆ
ಮುಗಿದೇ ಹೋಯಿತು
ಎಂದೆನಿಸಿದಾಗ-
ಅಬ್ಬಕ್ಕನಂತೆ ಅಬ್ಬರಿಸಿ
ಒಂದೆರಡು ಹೆಣವಾದರೂ ಉರುಳಿಸಬೇಕಿತ್ತು

- Advertisement -

ನಿನ್ನ ಬದುಕಿನ ವಿದಾಯ
ಹರಾಜಾಗುತಿದೆ
ಎಂದೆನಿಸಿದಾಗ-
ಹುರಿಗೊಂಡ ಅವರ
ಅಂಗಗಳನು ಕತ್ತರಿಸಬೇಕಿತ್ತು

ನಿನ್ನ ವಿವೇಕವ ಲೂಟಿ ಮಾಡಿ,ಹತೋಟಿ ತಪ್ಪಿತು
ಎಂದೆನಿಸಿದಾಗ-
ನಾಲಿಗೆ ಉಳಿಸಿಕೊಂಡು,
ಕಾಗದದ ಮೇಲಾದರೂ
ತಗುಲಿ,ಮಲಬೇಕಿತ್ತು

ನಿನ್ನ ಹಣೆ ಬೆವರು
ಕಾವೇರುತಿದೆ
ಎಂದೆನಿಸಿದಾಗ-
ಅವರ ಸಾವಿನ ಬೀಜವಾದರೂ
ಒತ್ತಬೇಕಿತ್ತು

ಮನಿಷಾ…..ಮನಿಷಾ!
ನಿನ್ನ ನಿಶ್ಯಕ್ತಿ ಶರೀರ ಸುಡುತ್ತಾರೆ ಎಂದೆನಿಸಿದಾಗ-
ಕೊನೆಯ ಅಗ್ನಿಯೊಳಗೆಳೆದು
ಒಬ್ಬನನ್ನಾದರೂ ಚಾದರದಂತೆ ಹೊದೆದುಕೊಳ್ಳಬೇಕಿತ್ತು.

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group