spot_img
spot_img

ಚುಟುಕುಗಳು

Must Read

- Advertisement -

ಸ್ಮರಣೆ

ಬಾವುಟ ಹಾರಿಸಿದ
ಮಂತ್ರಿಗಳು ಮಾಡಿದರು
‘ಗಾಂಧಿ ಸ್ಮರಣೆ ‘
ಎದುರು ರಸ್ತೆಯ ಬಾರೊಂದರಲಿ
ನಡೆದಿತ್ತು…
ಭರ್ಜರಿ ಸೇಂದಿ ಸ್ಮರಣೆ…

ಹುಚ್ಚ

ಬಟ್ಟೆ ಗಂಟುಗಳ
ಹಿಮಾಲಯ ಪರ್ವತ
ಮೆದುಳ ತುಂಬಾ
ಥಕ ದಿಂ-ಥಕ ದಿಂ
ಭಾವಗಳ ಭರತನಾಟ್ಯ,
ಶೃತಿಯಿಲ್ಲದ ಗಾನ
ಹಾಡುವ ಆತ ದಿನವೂ
ರಸ್ತೆಯ ಅಂಚಿನಲ್ಲಿ
ಹುಡುಕುತ್ತಿದ್ದಾನೆ
ಬೆಂಕಿ ಅಪಘಾತದಲ್ಲಿ
ಭಸ್ಮವಾದ…
ತನ್ನ ಹೆಂಡತಿ-ಮಕ್ಕಳನ್ನು!!!
ರಾತ್ರಿ-ಹಗಲೆನ್ನದೆ
ಮಳೆ-ಚಳಿ-ಗಾಳಿಗಳ ಮಧ್ಯೆ…

- Advertisement -

ಅಚ್ಚರಿ..ಅಚ್ಚರಿ

ಯುವಶಕ್ತಿ ಸಿಡಿದೇಳಬೇಕು
ಎಂಬ ಕರೆ ಕೇಳಿ
ನಮ್ಮೂರ ಯುವಕರು ಸಿಡಿದೆದ್ದು,
ಬಾರಿಗೆ ನುಗ್ಗಿ ‘ಗುಂಡು’ಹಾಕಿ
ಊರೊಳಗೆ ನುಗ್ಗಿ
ರಾತ್ರೋರಾತ್ರಿ
ಹಲವರ ತೆಂಗು-,ಮಾವು
ತೋಟಗಳಿಗೆ ನುಗ್ಗಿ,
ಮರಗಳಿಗೆ ಲಗ್ಗೆ ಹಾಕಿ
ರಸದೌತಣ ಮಾಡಿದರು…

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group