spot_img
spot_img

ಪಾಲಕರೇ , ನಿಮ್ಮ ಮಗುವನ್ನು ಶಾಲೆಗೆ ಸೇರಿಸಬೇಕೇ ?

Must Read

- Advertisement -

ಮಕ್ಕಳ ಶಿಕ್ಷಣ ; ಪಾಲಕರ ಗಮನಕ್ಕಾಗಿ…..

ಪಾಲಕರೇ ,ನಿಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣ ಕುರಿತು ನೀವು ತಿಳಿದು ಕೊಳ್ಳಲೇ ಬೇಕಾದ ಕೆಲ ಸತ್ಯ ಸಂಗತಿಗಳು ಇಲ್ಲಿವೆ . ದಯವಿಟ್ಟು ಓದಿ ತಿಳಿದುಕೊಳ್ಳಿ.

  • ಬೆಳೆಯುವ ಮಕ್ಕಳ ಮೆದುಳಿನ ವಿಕಾಸ ಮಾತೃಭಾಷಾ ಶಿಕ್ಷಣದಿಂದ ಮಾತ್ರ ಸಾಧ್ಯ. ಇದು ವೈಜ್ಞಾನಿಕ ಸತ್ಯ ಇದು ನಿಮಗೆ ಸತ್ಯ ಅನಿಸಬೇಕಾದರೆ ಸರಕಾರಿ ಶಾಲೆಯಲ್ಲಿ ಮಾತೃಭಾಷಾ ಶಿಕ್ಷಣ ಪಡೆಯುತ್ತಿರುವ ಹುಡುಗನ ಹಾಗೂ ಆರಂಭದಿಂದಲೂ ಇಂಗ್ಲಿಷ್ ಭಾಷೆಯಲ್ಲೇ ಓದುತ್ತಿರುವ ಹುಡುಗನ ಚಟುವಟಿಕೆಗಳೊಂದಿಗೆ ಹೋಲಿಸಿ ನೋಡಿ.
  • ಇಂಗ್ಲೀಷ ಓದಿ ವಿದೇಶಗಳಲ್ಲಿ ನೌಕರಿ ಹಿಡಿದು ದುಡ್ಡು ಗಳಿಸುವುದೇ ಜೀವನವಲ್ಲ. ಮಾನವೀಯತೆಯಿಂದ ಬದುಕುವುದು ಮುಖ್ಯ. ಆ ಮಾನವೀಯ ಪಾಠ ದೊರೆಯುವುದು ಸರಕಾರಿ ಮಾತೃಭಾಷಾ ಶಾಲೆಗಳಲ್ಲಿ.
  • ಸರಕಾರಿ ಶಾಲೆಗಳಲ್ಲಿ ಇರುವುದು ಸಹಜ ಶಿಕ್ಷಣ.ಇಲ್ಲಿ ಕಂಠಪಾಠದ ಶಿಕ್ಷಣವಿಲ್ಲ. ಇಲ್ಲಿ ಮಕ್ಕಳು ಮಾರ್ಕ್ಸ್ ಮಷಿನ್ ಗಳಾಗದೆ ಬದುಕಿನ ಪಾಠ ಕಲಿಯುತ್ತಾರೆ.
  • ಮಾರ್ಕ್ಸ್ಗಗಳು ಮಕ್ಕಳ ಪ್ರತಿಭೆಯ ಮಾನದಂಡವಲ್ಲ. ಪದವಿಯಲ್ಲಿ ಕೇವಲ 35 ಮಾರ್ಕ್ಸ್ ಪಡೆದು ಪಾಸಾದವರೂ IAS ,KAS, ಬೇಕಾದ ಪರೀಕ್ಷೆಗಳಿಗೆ ಹಾಜರಾಗಿ ಪರೀಕ್ಷೆ ಬರೆದು ಪಾಸಾಗಬಹುದು.
  • ಪಾಲಕರೇ ನೀವು ಅನಾಥಾಶ್ರಮಗಳ ಪಾಲಾಗುವುದು ಬೇಡ ಅಂದರೆ ನಿಮ್ಮ ಮಕ್ಕಳನ್ನು ಮಾತೃಭಾಷಾ ಸರಕಾರಿ ಶಾಲೆಗಳಿಗೆ ಕಳಿಸಿ. ಅವರು ಪರಭಾಷೆ ಕಲಿತು ಪರದೇಶಕ್ಕೆ ಹಾರಿದರೆ ನಿಮಗೆ ಮುಪ್ಪಾವಸ್ಥೆಯಲ್ಲಿ ಅನಾಥಾಶ್ರಮಗಳೇ ಗತಿ. ಇಂದು ಇಂಥ ಹೆತ್ತವರ ಉಧಾಹರಣೆಗಳು ನಮ್ಮ ಮುಂದಿವೆ.
  • ಸರಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡುವ ಶಿಕ್ಷಕರು ಅರ್ಹ ಶಿಕ್ಷಣ ಪಡೆದಿದ್ದು, ಕಲಿಕಾ ತರಬೇತಿ ಪಡೆದವರಿರುತ್ತಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಕಲೆ ಅವರಿಗೆ ಗೊತ್ತಿರುತ್ತದೆ.
  • ಸರಕಾರಿ ಶಾಲೆಗಳಲ್ಲಿರುವ ಗುತ್ತಿಗೆ ಶಿಕ್ಷಕರೂ ಕೂಡ ಅರ್ಹ ಶಿಕ್ಷಣ ಪಡೆದವರೇ ಇರುತ್ತಾರೆ.
  • ಸರಕಾರಿ ಶಾಲೆಯಲ್ಲಿ ನಿಮ್ಮ ಮಗುವಿಗೆ ಯಾವುದೇ ಮಾನಸಿಕ ಹಿಂಸೆ ಇಲ್ಲ. ಮೇಲು ಕೀಳು ಭಾವನೆ ಇಲ್ಲ. ಆಯಾ ದಿನ ಇಂಥಹದೇ ಊಟ ತರಬೇಕೆಂಬ ಕಟ್ಟಪ್ಪಣೆ ಇಲ್ಲ.
  • ಬಿಸಿಯೂಟ ತಿನ್ನಲೇ ಬೇಕೆಂಬ ಒತ್ತಾಯವಿಲ್ಲ. ಮನೆಯಿಂದಲೂ ಬೇಕಾದ ಊಟ ತಂದು ಮಕ್ಕಳೊಂದಿಗೆ ತಿನ್ನ ಬಹುದು ಇಲ್ಲಿ ಮಗು ಆರಂಭದಲ್ಲೇ ಸಮಾನತೆಯ ಪಾಠ ಕಲಿಯುತ್ತದೆ.
  • ನಿಮ್ಮ ತಾಯ್ನುಡಿ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ನಿಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ಕೊಡಿಸಿ.
  • ಖಾಸಗಿ ಶಾಲೆಗಳಿಗೆ ನಿಮ್ಮ ಮಕ್ಕಳಿಗಾಗಿ ಪ್ರತಿವರ್ಷ ಒಂದು ಲಕ್ಷ ಖರ್ಚು ಮಾಡುತ್ತೀರಿ ಅಂದರೆ ನಿಮ್ಮ ಮಗ ಶಿಕ್ಷಣ ಮುಗಿಸುವಷ್ಟರಲ್ಲಿ 20 ರಿಂದ 25 ಲಕ್ಷ ಮಾಡುತ್ತೀರಿ. ಆದರೆ ಸರಕಾರಿ ಶಾಲೆಗಳಲ್ಲಿ ನೀವು ಹಣಕ್ಕಾಗಿ ಜೇಬಿಗೆ ಕೈ ಹಾಕುವ ಕಾರಣವೇ ಇಲ್ಲ.
  • ಸರಕಾರಿ ಶಾಲೆಗಳಿಗೆ ಕೇವಲ ನಿಮ್ಮ ಮಕ್ಕಳನ್ನಷ್ಟೇ ಕರೆದು ತನ್ನಿ. ಶುಲ್ಕ್ ಬೇಡ. ಪುಸ್ತಕ ಬೇಡ. ಬಟ್ಟೆ ಬೇಡ. ಶೂ ಬೇಡ. ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಇಲ್ಲಿ ವಿಟಮಿನ್ ಗುಳಿಗೆಗಳೂ ಸಿಗುತ್ತವೆ.

ಲೇಖಕರು: ನಾರಾಯಣ ತೆಳಗಡಿ

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group