ಸಿಂದಗಿ: ಪಟ್ಟಣದ ತಾಲೂಕ ಪಂಚಾಯತ ಮಾಜಿ ಅದ್ಯಕ್ಷಿಣಿ ಶ್ರೀಮತಿ ಮಹಾನಂದ ಅಮರೇಶ ಸಾಲಕ್ಕಿ ಅವರ ಒಂದು ವರ್ಷದ ಆಡಳಿತ ಗಮನಿಸಿ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ ಆಯ್ಕೆಗೊಂಡ ನಿಮಿತ್ತವಾಗಿ ಅವರನ್ನು ಜ್ಯೋತಿ ನಗರದ ತಾಲೂಕಾ ಪಂಚಾಯತ ನಾಮ ನಿರ್ದೇಶಕ ಶಿವುಕುಮಾರ ಬಿರಾದಾರ (ಮನ್ನಾಪೂರ ) ಅವರ ಸದನದಲ್ಲಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಸರಳ ಸಮಾರಂಭದಲ್ಲಿ ನಾದ ಸರಕಾರಿ ಪ್ರೌಢ ಶಾಲೆಯ ದೈಹಿಕ ನಿರ್ದೇಶಕ ಸಂಗನಗೌಡ ಹಚಡದ ಮಾತನಾಡಿ ಅಧಿಕಾರ ಇರುವಾಗ ಜನ ಸಾಮಾನ್ಯರೊಂದಿಗೆ ನೋವು ನಲಿವು ಆಲಿಸಬೇಕು.ಸತತ ಸಮಾಜ ಸೇವೆ ಮಾಡಬೇಕು. ಸರಕಾರದ ಸೌಲಭ್ಯಗಳನ್ನು ಜನರಿಗೆ ತಿಳಿಸಬೇಕು. ಈ ಪ್ರಕಾರವಾಗಿ ಸೇವೆ ಮಾಡಿದವರಿಗೆ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ ನೀಡಿ ಗೌರವಿಸುತ್ತದೆ ಅದರಲ್ಲಿ ಸಿಂದಗಿ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಶ್ರೀಮತಿ ಮಹಾನಂದ ಅಮರೇಶ ಸಾಲಕ್ಕಿ ಆಯ್ಕೆಗೊಂಡಿರುವದಕ್ಕೆ ಅನಂತ ಅಭಿನಂದನೆಗಳು ತಿಳಿಸಿದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ. ಶಿಕ್ಷಕ ಬಸವರಾಜ ಅಗಸರ,.ಸೊಂಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ ಎನ್ ಶಿರಕನಳ್ಳಿ ಸೇರಿದಂತೆ ಹಲವರು ಭಾಗವಹಿಸಿದರು.