spot_img
spot_img

ಯಾವುದು ಅದೃಷ್ಟ ?

Must Read

- Advertisement -

ಆಧ್ಯಾತ್ಮಿಕವಾಗಿ ಚಿಂತನೆ ನಡೆಸಿದರೆ, ನಮಗೆ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅದೃಷ್ಟವೋ? ಅಥವಾ ಖಾಸಗಿ ಕೆಲಸಮಾಡುತ್ತಿದ್ದರೆ ಅದೃಷ್ಟ ವೋ ತಿಳಿಯಬೇಕಿದೆ.

ಇಲ್ಲಿ ಸರ್ಕಾರದ ಕೆಲಸ ದೇವರ ಕೆಲಸ. ಹಾಗೆ ಕಾಯಕವೆಕೈಲಾಸ ಎನ್ನುವ ಪ್ರಕಾರ, ನಾವು ಕೆಲಸವನ್ನು ಯಾವರೀತಿಯಲ್ಲಿ ಮಾಡುತ್ತೇವೆ,ಯಾರ ಪರವಾಗಿ ಮಾಡುತ್ತೇವೆ, ಯಾವ ಭೂಮಿಯಲ್ಲಿ ಮಾಡುತ್ತೇವೆ. ಯಾರಿಗಾಗಿ ಮಾಡುತ್ತೇವೆ, ಯಾರ ಸಹಕಾರದಲ್ಲಿ ಮಾಡುತ್ತೇವೆ, ಯಾರು ಮಾಡಿಸುತ್ತಿರುವುದು, ಯಾಕೆ ಮಾಡುತ್ತಿರುವುದು…ಹೀಗೆ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋಗುವಾಗ ನಾವು ಒಬ್ಬ ಪ್ರಜೆಯಾಗಿದ್ದರೆ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅದು ಅದೃಷ್ಟಎನ್ನಬಹುದು.

ಇಲ್ಲ ಕೆಲಸ ನನ್ನ ಸಂಸಾರಕ್ಕೆ ಮಾತ್ರ ಎಂದು ಮಾಡುತ್ತಿದ್ದರೆ ಇದರಲ್ಲಿ ಖಾಸಗಿ ಕೆಲಸವೆ ಉತ್ತಮವೆನಿಸುತ್ತದೆ. ಕಾರಣವಿಷ್ಟೆ, ಸರ್ಕಾರದ ಕೆಲಸ ದೇವರ ಕೆಲಸವಾದಾಗ ದೇವರು ಎಲ್ಲರೊಳಗೂ ಇದ್ದು ಅದರಲ್ಲಿ ನನಗೊಂದು ಸೇವೆ ಮಾಡುವ ಅವಕಾಶವಿದೆ ಎನ್ನಬಹುದು.

- Advertisement -

ಇದರಿಂದಾಗಿ ನಮ್ಮ ಸಮಾಜದ ಋಣ ತೀರಿಸಲು ಒಂದವಕಾಶ.
ಆದರೆ, ಈಗಿನ ನಮ್ಮ ಸರ್ಕಾರಿಉದ್ಯೋಗ ಸ್ಥಳಗಳಲ್ಲಿ ಸ್ವಚ್ಛ ಅಧಿಕಾರಿಗಳೆ ಮರೆಯಾಗುತ್ತಿರುವ ಸಮಯದಲ್ಲಿ ನಾವು ಎಷ್ಟೇ ಸ್ವಚ್ಚ ಮನಸ್ಸಿನಲ್ಲಿ ಕೆಲಸ ಮಾಡಿದರೂ ಅದನ್ನು ಪ್ರೋತ್ಸಾಹ ಮಾಡುವ ,ಸಹಕರಿಸುವ ಸಹೋದ್ಯೋಗಿಗಳಿಲ್ಲವಾದರೆ ಖಾಸಗಿ ಉದ್ಯೋಗವೇ ಉತ್ತಮ ವಾದ ಆತ್ಮವಿಶ್ವಾಸ ಹೆಚ್ಚಿಸುತ್ತದೆಯೆನ್ನಬಹುದು.

ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಂಡವರೆ ಇತ್ತೀಚೆಗೆ ತಮ್ಮ ಸ್ವಾರ್ಥ ಸುಖಕ್ಕಾಗಿ ಸರ್ಕಾರವನ್ನು ದಾರಿ ತಪ್ಪಿಸಲು ಕಾರಣರಾಗಿರುವಾಗ ಏನೂ ಅರಿಯದ ಅಮಾಯಕರಿಗೆ ಸರ್ಕಾರಿ ಕೆಲಸದಲ್ಲಿ ಸ್ವತಂತ್ರವಾಗಿ ಕೆಲಸಮಾಡಲು ಕಷ್ಟವಿದೆ. ಈ ಕಾರಣಕ್ಕಾಗಿಯೇ ಭಾರತ ಇಂದು ಭ್ರಷ್ಟಾಚಾರಕ್ಕೆ ಹೆಚ್ಚು ಪ್ರಸಿದ್ದವಾಗಿರುವುದಾಗಿದೆ.

ಅಜ್ಞಾನದಲ್ಲಿ ಬೌತಿಕವಾಗಿ ಚಿಂತನೆ ನಡೆಸಿದರೆ,ಸರ್ಕಾರದ ಕೆಲಸದಲ್ಲಿ ಭದ್ರತೆ ಇರುತ್ತದೆ.ಇಲ್ಲಿ ಒಮ್ಮೆ ಕೆಲಸ ಸಿಕ್ಕ ನಂತರ ಜೀವಮಾನವಿಡೀ ಅಲ್ಲೇ ಇದ್ದು ಕೆಲಸ ಮಾಡುವ ಕಾರಣ ನಿರಾಳವಾದ ಬದುಕನ್ನು ಕಳೆಯಬಹುದೆನ್ನುವುದಕ್ಕೆ ಹೆಚ್ಚು ಜನರು ಇದನ್ನು ಇಷ್ಟಪಟ್ಟರೂ, ಅದರಲ್ಲಿಯೂ ತಮ್ಮ ಆತ್ಮಸಾಕ್ಷಿಗೆ ವಿರುದ್ದ ಕೆಲಸ ಮಾಡುವ ಪರಿಸ್ಥಿತಿ ಇರುವುದೆನ್ನುವ ಸತ್ಯ ಅರ್ಥ ಮಾಡಿಕೊಂಡು ಎಷ್ಟೋ ಬುದ್ದಿವಂತ, ಜ್ಞಾನಿಗಳು ದೇಶ ಬಿಟ್ಟು ವಿದೇಶದಲ್ಲಿ ದುಡಿಯುತ್ತಿದ್ದಾರೆ.

- Advertisement -

ಸಾಕಷ್ಟು ಸಂಖ್ಯೆಯಲ್ಲಿ ದೇಶದೊಳಗೆ ಇರುವ ವಿದೇಶಿ ಹಾಗು‌ ಸ್ವದೇಶಿ ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಯುವಕ ಯುವತಿಯರಿಗೆ ದೇಶದ ಬಗ್ಗೆ ಯಾವುದೇ ಹೆಚ್ಚಿನ ಆಸಕ್ತಿ ಇಲ್ಲದೆ ತಮ್ಮ ಜೀವನ ನಡೆಸಿರುವುದು ವಿಪರ್ಯಾಸವೆಂದರೆ ತಪ್ಪಿಲ್ಲ.

ಕೈ ತುಂಬಾ ಹಣ ಬಂದು ತಮ್ಮ ಮನರಂಜನೆಗಾಗಿ ದೇಶವನ್ನು ಹಿಂದೆ ನಿಲ್ಲಿಸಿರುವ ಎಷ್ಟೋ ಪ್ರಜೆಗಳಿಗೆ ದೇಶದ ಧರ್ಮ ಕರ್ಮ ಋಣ ತಿಳಿಯಲು ಸಾಧ್ಯವಾಗಿಲ್ಲ. ಕೆಲವರಷ್ಟೇ ಎಲ್ಲೇ ಕೆಲಸ ಮಾಡಿದ್ದರೂ ತಮ್ಮ ಧರ್ಮ ಕರ್ಮಕ್ಕೆ ಚ್ಯುತಿ ಬರದಂತೆ ನಡೆದಿರೋದಾಗಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group