ಹಿಂದಿ ಶಿಕ್ಷಕರ ಸಂಘದಿಂದ ಪುಸ್ತಕ ವಿತರಣೆ
ಮೂಡಲಗಿ – ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ಬಗ್ಗೆ ಅವಶ್ಯವಾಗಿ ತಿಳಿದಿರಬೇಕು. ಅವರಿಗಾಗಿಯೇ ಬರೆಯಲಾದ ಪುಸ್ತಕ ” ಎಚ್ಚತ್ತ ಭಾರತ ” ರಚನೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಎಮ್.ಪಿ.ಗೀದಿ ಹೇಳಿದರು.
ಕಳೆದ ಸೆ. 5 ರಂದು ‘ ಶಿಕ್ಷಕರ ದಿನಾಚರಣೆ ‘ ಯ ನಿಮಿತ್ತ ಬೆಳಗಾವಿ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡಲಗಿ ಇವರ ಆಶ್ರಯದಲ್ಲಿ ಗುಡ್ಲಮಡ್ಡಿ ಈರಣ್ಣನ ಗುಡಿಯಲ್ಲಿ ಜರುಗಿದ ಸಮಾರಂಭದಲ್ಲಿ ಪುಸ್ತಕ ವಿತರಣೆ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೆಹಲಿಯ ರಾಮಕೃಷ್ಣ ಮಿಶನ್ ಪ್ರಕಟಿಸಿರುವ ಮೂಲ ಇಂಗ್ಲೀಷ್ ಭಾಷೆಯ ಸಂಕಲನ ” Awakened India ” ಎಂಬ ಪುಸ್ತಕದ ಕನ್ನಡ ಅನುವಾದ ” ಎಚ್ಚತ್ತ ಭಾರತ ” ಎಂಬ ಪುಸ್ತಕವನ್ನು ಮೈಸೂರಿನ ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಪ್ರಕಾಶಿಸಿದ್ದು, ಅದನ್ನು ರಾಜ್ಯ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದವರು ಯುವಕರಿಗಾಗಿ ಹಂಚುವ ಕೆಲಸ ಮಾಡಿದ್ದಾರೆ.