1
ಶ್ರೀ ಸಿದ್ದಗಂಗಾ ಕ್ಷೇತ್ರದಗುರು
ಚರಣಕೆ ಶರಣು ಸಾವಿರದ ಶರಣು
ಶಿವನ ರೂಪದಿ ಶಿವಣ್ಣನಾಗಿ
ಧರೆಗವತರಿಸಿ ಬಂದ ಶರಣರಿಗೆ ಸಾವಿರದಶರಣು !!
2
ಸಂಸಾರದ ಜಂಜಡದ ಬೇಲಿಯ ತೊರೆದು
ಖಾವಿಬಟ್ಟೆಯ ನಿಜ ತೃಷೆಯ ಹಂಬಲಕೆ
ವಾಲಿತು ನಿಮ್ಮ ಮನ ಮನದೊಳಗೆ ಮೂಡಿದವು ಕ್ರಾಂತಿಕಾರಕ ಬಸವತತ್ವದ ಆದರ್ಶ
ಬೆಳಸಿದ ಶರಣರಿಗೆ ಸಾವಿರದ ಶರಣ. !!
3
ನನಗೇನು ಬೇಡ ವಿಶ್ವಕೇನೆ ಬೇಕೆನ್ನುವ
ಕಾಯಕ ನಿಷ್ಟೆಯ ಬೀಜಾಂಕುರದ ಬಾಳಬುತ್ತಿಯ
ಧಾರೆಯೆರೆದರು ತನ್ನ ತಾ ಮರೆತು ಬಾಳಿ ಬದುಕಿದ
ನಿಷ್ಕಾಮಿ ಶರಣರಿಗೆ ಸಾವಿರದ ಶರಣು !!
4
ಕಾಯಕಯೋಗಿ , ತ್ರಿವಿಧ ದಾಸೋಹಿ,
ದಾನಚಿಂತಾಮಣಿ, ಅಕ್ಷರಬ್ರಹ್ಮ,
ಅನ್ನದಾಸೋಹಿ, ವಿಧ್ಯಾಗುರುಶೇಷ್ಠ ,
ನಡೆದಾಡುವ ದೇವರಿಗೆ ಶರಣು ಸಾವಿರದ ಶರಣು !!
5
ಮಹಾನ್ ಜಂಗಮಯೋಗಿ,
“”ವಿಶ್ವ ಚೇತನ”” , ಮಕ್ಕಳ ಪ್ರೇಮಿ ,
ಶತಾಯುಷಿ ,ಅಧ್ಯಾತ್ಮ ಚಿಂತಕ ,
ಜ್ಞಾನ ಮೂರುತಿಗೆ ಸಾವಿರದ ಶರಣು !!
6
ಸಿದ್ದಿಪುರುಷ ,ಅಕ್ಷರದಾಸೋಹಿ ,
“” ವಿಶ್ವರತ್ನ “” ಜಂಗಮಪುಂಜ,
ನಿತ್ಯಕಾಯಕಯೋಗಿ,ತ್ಯಾಗಮಹಿ, ಧರ್ಮಜಾಗ್ರತೆಯ
ಸಂಗಮ ಶರಣರಿಗೆ ಸಾವಿರದ ಶರಣು !!
7
ತ್ರಿಕಾಲ ಪೂಜಾನಿಷ್ಟರು, ನಿತ್ಯದಾಸೋಹಿ,
ಅನಾಥ ಮಕ್ಕಳ, ವಾತ್ಸಲ್ಯಮಹಿ ,
ಜಂಗಮ ಕುಲಕೆ ದಾರಿದೀಪವಾಗಿಹ
ಶರಣಪಾದಕೆ ಸಾವಿರದ ಶರಣು !!
8
ಶ್ರೀ ಸಿದ್ದಗಂಗ ಕ್ಷೇತ್ರದಲ್ಲಿ ಶಿವನ
ಅವತಾರವೆತ್ತಿ ,ತಫಃ ಸಾಧಕಯೋಗಿ
ಯಾಗಿ ಜ್ಞಾನ ಮಾರ್ಗ ತೋರಿದ
ಸಿದ್ದಿ ಶರಣರಿಗೆ ಸಾವಿರದ ಶರಣು !!
9
ಈ ನಭೋಮಂಡಲಕೆ ಉಸಿರಿನೊಂದಿಗೆ
ಜನಿಸಿ ಧರ್ಮಸೇವೆಯ ಮಾರ್ಗ ತೋರಿ
ಅನಂತತೆಯಡೆಗೆ ” ಹೆಸರಿನೊಂದಿಗೆ ” ಹೆಜ್ಜೆಹಾಕಿದ
ಗುರುಸಂತ ಮಹಾಮುನಿಗೆ ಸಾವಿರದ ಶರಣು !!
ಹಾಚಿ ಇಟ್ಟಿಗಿ ಸಮರ್ಥ ಕನ್ನಡಿಗ ರಾಷ್ಟ್ರಪುರಸ್ಕೃತರು ಹೂವಿನ ಬಳ್ಳಾರಿ
9844312559