೫ ಲಕ್ಷದ ಕನ್ನಡಕ ಸಾಬೀತಾದರೆ ರಾಜಕೀಯ ಸನ್ಯಾಸ – ರಾಜಶೇಖರ ಪಾಟೀಲ

Must Read

ಬೀದರ – ನಾನು ತೊಡುವ ಕನ್ನಡಕ ೫ ಲಕ್ಷ ರೂ. ಎಂಬುದನ್ನು ಸಚಿವ ಭಗವಂತ ಖೂಬಾ ಸಾಬೀತು ಮಾಡಿದರೆ ನಾನು ರಾಜಕೀಯ ಬಿಡುತ್ತೇನೆ ಒಂದು ವೇಳೆ ಅದು ಸುಳ್ಳಾದರೆ ಖೂಬಾ ಅವರು ಜುಬ್ಬಾ ತೊಟ್ಟುಕೊಂಡು ಆರಾಮಾಗಿ ಮನೆಯಲ್ಲಿ ಇರಲಿ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಸವಾಲು ಹಾಕಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು ತಮ್ಮ ಕನ್ನಡಕವನ್ನು ಪ್ರದರ್ಶಿಸಿ, ಈ ಕನ್ನಡಕ ಯುಬಿ ಸಿಟಿಯಲ್ಲಿ ಕೊಂಡಿದ್ದು. ೫೦ ಸಾವಿರ ಬೆಲೆ ಬಾಳುತ್ತದೆ ಅಲ್ಲದೆ ನನ್ನ ಮಗಳು ನನಗೆ ಗಿಫ್ಟ್ ಕೊಟ್ಟಿದ್ದು. ಇದು ೫ ಲಕ್ಷದ್ದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಇಲ್ಲಿ ಬಿಹಾರ, ಉತ್ತರ ಪ್ರದೇಶ ರಾಜಕೀಯ ನಡೆದಿದೆ ಹಮ್ ದೇಖೆಂಗೆ, ತುಮ್ ದೇಖೆಂಗೆ…ಇದು ನಡೆಯಬಾರದು ಎಂದರು.

ಭಗವಂತ ಖೂಬಾ ಅವರೇ ಬೀದರ ಜಿಲ್ಲೆಗೆ ಪ್ರಥಮವಾಗಿ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ ಅದರ ಘನತೆಯನ್ನು ಉಳಿಸಿಕೊಳ್ಳಿ. ನಾವು ಯಾವುದೇ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಪಾಟೀಲ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group