ಮೊಬೈಲ್ ಜಾಸ್ತಿ ಬಳಸಬೇಡ ಓದಿಕೋ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

Must Read

ಬೀದರ – ಮೊಬೈಲ್ ಹೆಚ್ಚು ಬಳಕೆ ಮಾಡಬೇಡ ಓದುವ ಕಡೆ ಗಮನ ಹರಿಸು ಎಂದು ತಂದೆ ಹೇಳಿದ್ದಕ್ಕೆ ಬೇಸರ ಮಾಡಿಕೊಂಡ ಅಪ್ರಾಪ್ತ ಮಗಳು ನೇಣು ಹಾಕಿಕೊಂಡು ಜೀವ ತೆತ್ತ ಘಟನೆ ಗಡಿ ಜಿಲ್ಲೆ ಬೀದರನ ಕಮಲನಗರ ತಾಲೂಕಿನ ಡಿಗ್ಗಿ ಪಟ್ಟಣದಲ್ಲಿ ನಡೆದಿದೆ.

15 ವಯಸ್ಸಿನ ಮಗಳು ದಿನಾಲು ಮೊಬೈಲ್ ನಲ್ಲಿ ಇರುವುದನ್ನು ತಂದೆ, ಮಗಳೆ ಮೊಬೈಲ್‌ ಜಾಸ್ತಿ ಉಪಯೋಗ ಮಾಡಬೇಡ ಓದುವ ಕಡೆ ಗಮನ ಹರಿಸು ಎಂದು ಹೇಳಿ ಪರ ಊರಿಗೆ ಹೋಗಿದ್ದು ತಂದೆಯ ಮಾತಿಗೆ ಮನನೊಂದ 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸೋನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸೋನಿ ಸಂತೋಷ ಬನವಾಸೆ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ತಂದೆ ಸಂತೋಷ ಬನವಾಸೆ ನೀಡಿದ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವರದಿ : ನಂದಕುಮಾರ ಕರಂಜೆ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group