ಕವನ : ಬಿಡದಿರಿ ನಮ್ಮತನ

Must Read

ಬಿಡದಿರಿ ನಮ್ಮತನ

ತನ್ನತನವ ಬಿಟ್ಟು
ತನ್ನದಲ್ಲದಕೆ ಹರಿ ಬಿಟ್ಟು
ಕನ್ನಿಕೆಯ ಹಿಂದೋಡಿ
ಕುನ್ನಿಯಂತಾಗಬೇಕೆ ಮೋಡಿ.

ನಮ್ಮೊಳಗಿನದ ಸರಿಸಿ
ಪರರದಕೆ ಮೋಹಿಸಿ
ದಾಹ ತೀರಿದ ಮೇಲೆ
ಎಡ ಬಿಡಂಗಿಯಾಗಬೇಕೆ.

ಹರಸುವರು ಮೊದಲು
ಹೌಹಾರ ಬೇಡ
ಆರಿಸಿ ನೋಡೋಮ್ಮೆ
ತಾರಸಿಯ ಹತ್ತಿಸಿ ಒದೆಯುವರು.

ಮತ್ತಿನ ರಂಗು ತೋರಿಸಿ
ರಂಗಿನಾಟ ಆಡುವರು
ಕುಣಿಸುತಿಹರು ಮನ ಬಂದಂತೆ
ದಂಗಾಗದಿರು ಹಂಗು ತೊರೆದು.

ನೆಪ ಒಡ್ಡಿ ಕರೆವರು
ಕೊರಳ ಕೊಯ್ಯುವರು
ಪರ ಮೋಹ ತರವಲ್ಲ
ಓರೆ ಕೊರೆಗಳು ಸಹಜ ತಿದ್ದಿ ಮುಂದೆ ನಡೆ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group