ಸಿಂದಗಿ : ಅಖಿಲ ಭಾರತ ಪಂಚಮಸಾಲಿ ಮಹಾಸಭಾ(ರಿ)ಯ ರಾಜ್ಯಾಧ್ಯಕ್ಷ ಸೋಮಶೇಖರ ಆಲ್ಯಾಳ ಅವರ ಮಾರ್ಗದರ್ಶನದಲ್ಲಿ ಮತ್ತು ಸಂಗಮೇಶ್ ಚಿಂಚೋಳಿ ಇವರ ನೇತೃತ್ವದಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಶರಣಪ್ಪ ಪಾಟೀಲ್ ಅವರ ಆದೇಶದ ಮೆರೆಗೆ ಸಭೆ ಕರೆದು ತಾಲೂಕಿನ ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸರ್ವಾನುಮತದಿಂದ ಘೋಷಣೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಹೇಮಾ ಎಮ್ ಪಾಟೀಲ, ಅಧ್ಯಕ್ಷರಾಗಿ ಸುಜಾತ್ ರವಿ ಪಾಟೀಲ, ಉಪಾಧ್ಯಕ್ಷರಾಗಿ ಜ್ಯೋತಿ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾಗಿ ರೇಖಾ ಎಸ್ ಮರೊಲ್. ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪುಷ್ಪಾ ಶಿವನಗೌಡ ಬಿರಾದಾರ್, ಕಾನೂನು ಸಲಹೆಗಾರರಾಗಿ ವಿಜಯಲಕ್ಷ್ಮಿ ಎಮ್ ಶಾಬಾದಿ, ಖಜಾಂಚಿಯಾಗಿ ಸುರೇಖಾ ಎಮ್ ಪಾಟೀಲ, ಸಂಚಾಲಕರಾಗಿ ಭಾರತಿ ಬಿರಾದಾರ್, ಮಾಧ್ಯಮ ಸಲಹೆಗಾರರಾಗಿ ಶ್ರೀದೇವಿ ಎಸ್ ಪಾಟೀಲ, ಸಲಹಾ ಸದಸ್ಯರಾಗಿ ಭಾರತಿ ಆರ್ ಪಾಟೀಲ, ಕಾರ್ಯದರ್ಶಿಯಾಗಿ ಮೇಘಾ ನಾಗರಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಕಮಲಾ ಹಳ್ಳಿ, ಸದಸ್ಯರುಗಳಾಗಿ ಈರಮ್ಮ ಆರ್. ಪಾಟೀಲ, ನೀಲಗಂಗಾ ಬಿ ಬಿರಾದಾರ್, ಶರಣಮ್ಮ ಅಶೋಕ ಅಲ್ಲಾಪೂರ, ಶ್ರೀದೇವಿ ಚಂದ್ರಶೇಖರ ಅಲ್ಲಾಪೂರ, ವಿಜಯಲಕ್ಷ್ಮಿ ಹಣಮಂತ್ರಾಯ ಪಾಟೀಲ, ಈರಮ್ಮ ರುದ್ರಗೌಡ ಪಾಟೀಲ, ಮೀನಾಕ್ಷಿ ಮಾಂತಗೌಡ ಬಿರಾದಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ