spot_img
spot_img

ಶಾರ್ಟ್ ಸರ್ಕೀಟ್ ನಿಂದ ಕಬ್ಬಿಗೆ ಬೆಂಕಿ ತಗಲಿ ಕಂಗಾಲಾದ ರೈತ

Must Read

- Advertisement -

ಸಿಂದಗಿ: ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಹರಿದು ಮೂರು ಎಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ರೈತ ಅಶೋಕ ಧೂಳಪ್ಪ ಮುರಡಿ ಎಂಬುವವರ ಮೂರು ಎಕರೆ ಕಬ್ಬು ಶಾರ್ಟ್ ಸರ್ಕೀಟ್ ಗೆ ಸಿಲುಕಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ವಿದ್ಯುತ್ ತಂತಿ ಹರಿದ ಪರಿಣಾಮ ಮೂರು ಎಕರೆ ಬೆಳೆದ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ ತುಂಬಾ ಹಳೆದಾದ ವಿದ್ಯುತ್ ತಂತಿಯನ್ನು ಕೆಇಬಿ ಅವರು ತೆಗೆಯದೆ ಇರುವುದರಿಂದ ಈ ಅನಾಹುತ ನಡೆದಿದೆ ಎಂದು ಆರೋಪಿಸಲಾಗಿದೆ ರೈತನ ಒಂದು ವರ್ಷದ ಬದುಕು ಹಾಳಾಗಿದ್ದರಿಂದ ಹೆಸ್ಕಾಂ ಹಾಗೂ ಸರ್ಕಾರ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಸಿಂದಗಿ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು ಕೂಡಾ ಯಾವುದೇ ಪ್ರಯೋಜನೆ ಕಂಡಿಲ್ಲ. ಕಬ್ಬು ಸಂಪೂರ್ಣ ಸುಟ್ಟಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group