ಅದ್ದೂರಿಯಾಗಿ ನಡೆದ ಐದು ಪಲ್ಲಕ್ಕಿಗಳ ಮೆರವಣಿಗೆ

Must Read

ಸಿಂದಗಿ: ತಾಲೂಕಿನ ದೇವಣಗಾಂವ ಗ್ರಾಮದ ನಿಂಗರಾಯದೇವರ ಉಗ್ರಾಣಮನೆಯ ವಾಸ್ತು ಶಾಂತಿಯ ನಿಮಿತ್ತ ಐದು ಪಲ್ಲಕ್ಕಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ದೇವಣಗಾಂವ ಗ್ರಾಮದ ನಿಂಗರಾಯ ಪಲ್ಲಕ್ಕಿ, ಮಹಾಲಕ್ಷ್ಮಿ ಪಲ್ಲಕ್ಕಿ, ಮಂಗಳೂರಿನ ಮಾರಾಯಸಿದ್ದ ಪಲ್ಲಕ್ಕಿ, ಬ್ಯಾಡಗಿಹಾಳದ ನಿಂಗರಾಯ ಪಲ್ಲಕ್ಕಿ, ಬಮ್ಮನಹಳ್ಳಿಯ ಬೀರಣ್ಣದೇವರ ಪಲ್ಲಕ್ಕಿಗಳು, ಐದು ಗ್ರಾಮಗಳ ಈರಕಾರ ಪೂಜಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ನಿಂಗರಾಯ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖಬೀದಿಗಳಲ್ಲಿ ಡೊಳ್ಳು ಕಣಿತದೊಂದಿಗೆ ಮೆರವಣಿಗೆಯ ಮೂಲಕ ಸಂಚರಿಸಿ ಉಗ್ರಾಣಮನೆ ತಲುಪಿತು.

ಅಲ್ಲಿ ವಿವಿಧ ಪೂಜಾವಿಧಿವಿಧಾನಗಳು ಜರುಗಿದವು, ನಂತರ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಡೊಳ್ಳಿನ ಪದಗಳ ಮೇಳ ಹಮ್ಮಿಕೊಳ್ಳಲಾಗಿತ್ತು.

Latest News

ಲೇಖನ : ಅಕ್ಕ ಮಹಾದೇವಿ ತಾಯಿಯನ್ನು ಬೆತ್ತಲೆ ಮಾಡಿದ ಗಂಗಾ ಮಾತಾಜಿ

ಅಕ್ಕ ಮಹಾದೇವಿ ಬೆತ್ತಲೆ - ಗಂಗಾ ಮಾತಾಜಿ ಬೇಜವಾಬ್ದಾರಿ ವಚನ ಟಿವಿ ಸಂದರ್ಶನಬಸವ ಸಂಸ್ಕೃತಿಯ ಅಭಿಯಾನದಲ್ಲಿ ಕೆ ಎಲ್ ಈ ಸಂಸ್ಥೆಯ ಮೃತ್ಯುಂಜಯ ಕಾಲೇಜಿನ ಕಲಾ...

More Articles Like This

error: Content is protected !!
Join WhatsApp Group