ಬೀದರ – ಉಪಚುನಾವಾಣೆ ಸಮಯದಲ್ಲಿ ಬೀದರ್ ನಲ್ಲಿ ಕರೋನ ಸಾವು ನೋವು ಹೆಚ್ಚಾಗಿದ್ದು ರಾಜ್ಯದಲ್ಲಿ ಬೀದರ್ ಜಿಲ್ಲೆಯು ಕರೋನ ರೆಡ್ ಝೋನ್ ನಲ್ಲಿ ಇದ್ದದ್ದು.. ಜಿಲ್ಲಾಡಳಿತ ಹಗಲು ರಾತ್ರಿ ಕೆಲಸ ಮಾಡಿ ಕರೋನ ಮುಕ್ತ ಜಿಲ್ಲೆಯನ್ನಾಗಿ ಮಾಡಿದೆ.
ಆದರೆ ಬಸವಕಲ್ಯಾಣ ಶಾಸಕರು ಮಾತ್ರ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಹಂಚುವ ನೆಪದಲ್ಲಿ ಬಡವರ ಜೀವನದ ಜೊತೆ ಆಟ ಆಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬಸವಕಲ್ಯಾಣ ಮತಕ್ಷೇತ್ರದ ಗಡಿರಾಯಪಳ್ಳಿ, ಕಾದೆಪೂರ,ಲಿಂಬಾಪುರ ಗ್ರಾಮಗಳಿಗೆ ತೆರಳಿ ಗ್ರಾಮಗಳ ಬಡ ಮತ್ತು ಕೂಲಿಕಾರ್ಮಿಕರಿಗೆ ಕರೋನಾ ನಿಯಮದ ವಿರುದ್ಧವಾಗಿ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಅವರು ಜನರನ್ನು ಉದ್ದೇಶಿಸಿ ಮಾತನಾಡಿ, ಕರೋನಾ ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ಧಾರೆ ಆದ ಕಾರಣ ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆ ಮಾಡುತ್ತಿರುವೆ ಕರೋನಾ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ ಹಾಗಾಗಿ ಪ್ರತಿಯೊಬ್ಬರು ಕರೊನಾ ನಿಯಮವನ್ನು ಪಾಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು. ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಿಲ್ಲ ಎಂದು ಬಸವಕಲ್ಯಾಣ ಜನರು ಶರಣು ಸಲಗರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.