ಬೀದರ :ಕರ್ನಾಟಕ ರಾಜ್ಯಾದ್ಯಂತ ಲಾಕ್ ಇದ್ದ ಹಿನ್ನೆಲೆಯಲ್ಲಿ ಕೆಲವು ರಾಜಕಾರಣಿಗಳು ತನ್ನ ತನ್ನ ಕ್ಷೇತ್ರದಲ್ಲಿ ಬಡಕುಟಂಬಗಳಿಗೆ ಆಹಾರ ಕಿಟ್ ಹಂಚಿದರು. ಇನ್ನೊಂದು ಕಡೆ ಬೀದರ್ ಶಾಹಿನ್ ಶಿಕ್ಷಣ ಸಂಸ್ಥೆಯ ನವದಂಪತಿಯಿಂದ ಆಹಾರ ಕಿಟ್ ವಿತರಣೆ ಮಾಡಿಸಿದರು.
ಜನರ ಅಭಿಪ್ರಾಯ ಪ್ರಕಾರ ದೇಶದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ದೇಣಿಗೆ ನೀಡಿದ್ದಾರೆ ಅದರಂತೆಯೇ ಗಡಿ ಜಿಲ್ಲೆ ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ನವ ದಂಪತಿಯಿಂದ ಊಟ ಹಂಚಿಕೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ಮದುವೆಯಾದ ರಾಜಕುಮಾರ್, ಲಕ್ಷ್ಮಿ ಸರಳವಾಗಿ ಮದುವೆ ಬಳಿಕ ಕೋವಿಡ್ ಆಸ್ಪತ್ರೆಯಲ್ಲಿ ಊಟ ಹಂಚಿದರು. ಕೊರೋನಾ ಸೋಂಕಿತರು, ಸಂಬಂಧಿಕರು, ಆಸ್ಪತ್ರೆ ಡಿ ಗ್ರುಪ್ ನೌಕರರು, ಆಸ್ಪತ್ರೆಯ ಸಿಬ್ಬಂದಿಗೆ ಊಟ ಹಂಚುವ ಮೂಲಕ ವಿಶೇಷವಾಗಿ ಮದುವೆ ಸಂಭ್ರಮಾಚರಣೆ ಮಾಡಿಕೊಂಡರು.
ಆಡಂಬರದ ಮದುವೆ ಬದಲಿಗೆ ಕೋವಿಡ್ ಸೋಂಕಿತರಿಗೆ ನೆರವಾಗುವ ಮೂಲಕ ವಿಭಿನ್ನವಾಗಿ ಮದುವೆ ಸಂಭ್ರಮ ಮಾಡಿಕೊಂಡ ದಂಪತಿಗಳು ಎಲ್ಲರಿಗೂ ಮಾದರಿಯಾದರು.