- Advertisement -
ಬೀದರ – ಲಾರಿ ಮತ್ತು ಕಂಟೇನರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರು ಮೃತಪಟ್ಟ ಘಟನೆ ಸಂಭವಿಸಿದೆ.
ಲಾರಿ ಚಾಲಕ ವಿಜಯಕುಮಾರ್ ( 40 ) ಹಾಗೂ ಕಂಟೇನರ್ ಚಾಲಕ ರಾಮಕಿಶನ್ ( 32 ) ಸಾವನ್ನಪ್ಪಿದ ದುರ್ವೈವಿಗಳು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಂಗವಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು ಮತ್ತಿಬ್ಬರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.
- Advertisement -
ಗುಜರಾತಿನಿಂದ ಟೈಲ್ಸ್ ತುಂಬಿಕೊಂಡು ಬರುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಭಾಲ್ಕಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ,ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಲಾರಿ ಹಾಗೂ ಕಂಟೇನರ್ ವಾಹನಗಳು ನಜ್ಜುಗುಜ್ಜಾಗಿರುವ ಸ್ಥಿತಿ ನೋಡಿದರೆ ಘಟನೆಯ ಗಂಭೀರತೆಯ ಅರಿವಾಗುತ್ತದೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ