- Advertisement -
ಬೀದರ – ಯುದ್ಧ ಪೀಡಿತ ಯುಕ್ರೇನ್ ನಿಂದ ಆಪರೇಶನ್ ಗಂಗಾ ಯೋಜನೆಯ ಸಹಾಯದಿಂದ ಬೀದರ್ ನಗರದ ಅಮಿತ್ ಸಿರಂಜೆ ಯುಕ್ರೇನ್ ನ ಖಾರ್ಕಿವ್ ಪ್ರದೇಶದಿಂದ ಮನೆಗೆ ವಾಪಸಾದರು.
ದೆಹಲಿಯಿಂದ ಹೈದ್ರಾಬಾದ್ ನ ರಾಜೀವಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ನನ್ನು ಫೋಷಕರು ಹೂಗುಚ್ಚ ನೀಡಿ ಸಂತಸದಿಂದ ಸ್ವಾಗತಿಸಿದರು.
ಒಂದು ವಾರದಿಂದ ಬಾಂಬ್ ದಾಳಿಗಳ ನಡುವೆ ಜೀವ ಕೈಯಲ್ಲಿ ಹಿಡಕೊಂಡು ಪೊಲ್ಯಾಂಡ್ ಬಾರ್ಡರ್ ವರೆಗೆ ಧಾವಿಸಿದ್ದ ಅಮಿತ್ ತಮ್ಮ ಅನುಭವ ಹೇಳಿಕೊಂಡರು. ಆಪರೇಶನ್ ಗಂಗಾ ಮೂಲಕ ಮಗ ಮನೆ ಸೇರಿದಕ್ಕೆ ಪೋಷಕರು ಕೇಂದ್ರಕ್ಕೆ ಧನ್ಯತೆ ವ್ಯಕ್ತಪಡಿಸಿದರು.
- Advertisement -
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ