ನ್ಯಾಯಾಂಗ ಕ್ಷೇತ್ರದ ಭರವಸೆಯ ಬೆಳಕು ವಕೀಲರು – ಬಿ.ಎಂ.ಅಂಗಡಿ

Must Read

ಮುನವಳ್ಳಿ – “ಡಾ.ಬಾಬು ರಾಜೇಂದ್ರ ಪ್ರಸಾದ್ ಹುಟ್ಟಿದ ದಿನವನ್ನು ದೇಶದಾದ್ಯಂತ ರಾಷ್ಟ್ರೀಯ ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದೆ. ಒಬ್ಬ ವಕೀಲರಾಗಿ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಅವರ ಕೊಡುಗೆಗಳು ಮಹತ್ವದ್ದಾಗಿದೆ. ನಮ್ಮ ಗ್ರಾಮದ ಯುವಕರು ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿರುವರು. ಅವರೆಲ್ಲರಿಗೂ ನಮ್ಮ ಜೈಂಟ್ಸ ಗ್ರುಪ್ ಮುನವಳ್ಳಿ ವತಿಯಿಂದ ಇಂದು ಗೌರವ ಸನ್ಮಾನ ಜರುಗಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇವರ ಸ್ಥಾನಮಾನ ಮಹತ್ವದ್ದು ಇವರೆಲ್ಲ ನ್ಯಾಯಾಂಗ ಕ್ಷೇತ್ರದ ಭರವಸೆಯ ಬೆಳಕು.” ಎಂದು ಜೈಂಟ್ಸ ಗ್ರುಪ್ ಮುನವಳ್ಳಿಯ ಅಧ್ಯಕ್ಷರಾದ ಬಸವರಾಜ ಅಂಗಡಿ ತಿಳಿಸಿದರು.

ಅವರು ಮುನವಳ್ಳಿಯ ಜೈಂಟ್ಸ ಗ್ರುಪ್ ಆಶ್ರಯದಲ್ಲಿ ವಕೀಲರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಕೀಲರಾದ ವಾಯ್.ಪಿ.ರಾಮಜಾರ್, ಮೋಹನ ಸರ್ವಿ, ಎಸ್.ಎಸ್.ಮಾನಿ, ಆರ್.ಜಿ.ಗಂಗನ್ನವರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೈಂಟ್ಸ ಗ್ರುಪ್ ಸದಸ್ಯರಾದ ಡಾ.ಎಂ.ಬಿ.ಅಷ್ಠಗಿಮಠ, ಅರುಣಗೌಡ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಸೂರ್ಯಕಾಂತ ಗಂಗಾವತಿ, ಅನೀಲ ಕಿತ್ತೂರ, ಅಶೋಕ ರೇಣಕೆ, ಬಾಳು ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ.ಎಂ.ಬಿ.ಅಷ್ಠಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಳು ಹೊಸಮನಿ ನಿರೂಪಿಸಿದರು. ಅನೀಲ ಕಿತ್ತೂರ ವಂದಿಸಿದರು.

- Advertisement -
- Advertisement -

Latest News

ಪುಸ್ತಕ ಪರಿಚಯ

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"ಲೇಖಕರು :- ಮುರುಗೇಶ ಸಂಗಮ (೯೪೪೯೪೩೭೬೦೪) ಬೆಲೆ :- ೧೧೦ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group