spot_img
spot_img

ಬೀದರ ನಲ್ಲಿ ಅಗ್ನಿ ವೀರ ನೇಮಕಾತಿ ಪ್ರಕ್ರಿಯೆ

Must Read

- Advertisement -

 

ಸಂಚಾರದ ಪ್ರಮುಖ ರಸ್ತೆಗಳಲ್ಲಿ ಬದಲಾವಣೆ

ಬೀದರ: ಇದೇ ಡಿ.೫ ರಂದು ಅಗ್ನಿವೀರ ಸೇನೆ ನೇಮಕಾತಿ ಪ್ರಕ್ರಿಯೆಯು ಬೀದರನ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಬೀದರ ನಗರದ ಪ್ರಮುಖ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗು ಪೊಲೀಸ ಇಲಾಖೆ ನೆಹರು ಕ್ರೀಡಾಂಗಣದ ಸುತ್ತಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೋಲಿಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ.

- Advertisement -

ಡಿಸೆಂಬರ್ ೫  ರಿಂದ ೨೨ ರ ವರೆಗೆ ನಡೆಯಲಿರುವ ಸೇನಾ ನೇಮಕಾತಿಗಾಗಿ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ೪ ಜನ ಸರ್ಕಲ್ ಇನ್ಸ್‌ಪೆಕ್ಟರ್, ೧೨ ಜನ ಪಿಎಸ್ಐ, ೨೨ ಜನ ಎಎಸ್ಐ ಗಳು, ೩೪  ಜನ ಹೆಡ್ ಕಾನಸ್ಟೆಬಲ್ ಗಳು,  ೩೭ ಜನ ಪೋಲಿಸ್ ಕಾನಸ್ಟೆಬಲಗಳು ಹಾಗೂ ೫೦ ಜನ ಗೃಹ ರಕ್ಷಕ ದಳದವರನ್ನು ನಿಯೋಜನೆ ಮಾಡಲಾಗಿದೆ.

ಇದರ ಉಸ್ತುವಾರಿಯನ್ನು ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಮಹೇಶ್ ಮೇಘಣ್ಣನವರ ಹಾಗೂ ಡಿವೈಎಸ್ಪಿಯವರು ನೋಡಿಕೊಳ್ಳುವರು.

- Advertisement -

ಡಿಸೆಂಬರ್ ೫ ರಂದು ಬೆಳಿಗ್ಗೆ ೩ ಗಂಟೆಯಿಂದ ಡಿಸೆಂಬರ್ ೨೨ ರವರೆಗೆ ಮಡಿವಾಳ ಸರ್ಕಲನಿಂದ ಕೆಎಚ್.ಬಿ ಕಾಲನಿ ಜನವಾಡ ರೋಡ ಕಡೆಗೆ ಹೋಗಬೇಕು.

ಮೋಹನ್‌ ಮಾರ್ಕೆಟನಿಂದ ಓಲ್ಡ್ ಸಾಯಿ ಫ್ಯಾಬ್ರಿಕ್ ಸರ್ಕಲ್ ಮತ್ತು ರೋಟರಿ ಸರ್ಕಲ್ ಕಡೆಗೆ ವಾಹನ ಬಿಡುವದಿಲ್ಲ. ಚಂದ್ರಕಾಂತ ಗುದಗೆ ಆಸ್ಪತ್ರೆಯಿಂದ ರೋಟರಿ ಸರ್ಕಲ್ ಕಡೆಗೆ ವಾಹನ ಬಿಡುವದಿಲ್ಲ. ಅರಣ್ಯ ಇಲಾಖೆಯ ಕಛೇರಿಯಿಂದ ಕೆಇಬಿ ಕಚೇರಿ ಎದುರುಗಡೆಯಿಂದ ಸಾರ್ವಜನಿಕರು ಹೋಗಬಹುದಾಗಿದೆ. ಕೆ.ಇ.ಬಿ ಕಡೆಯಿಂದ ಅಕ್ಕಮಹಾದೇವಿ ಕಾಲೇಜು ರಸ್ತೆ ರಂಗಮಂದಿರ ಕಡೆ ಹೋಗುವದನ್ನು ಬ್ಲಾಕ್ ಮಾಡಲಾಗಿದೆ ಎಂದು ಡಿವೈಎಸ್ಪಿ ಸತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group