ಸಂಭ್ರಮ ಸಡಗರದ ವಚನೋತ್ಸವದ ಅಮೃತೋತ್ಸವ

Must Read

ಬೆಳಗಾವಿ:  ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವದ ವರ್ಷಾಚರಣೆ ವಚನ ಸಂಶೋಧಕ ಪಿತಾಮಹ ಫ. ಗು.ಹಳಕಟ್ಟಿಯವರ  ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆ ಬೆಳಗಾವಿ ಮಹಿಳಾ ಘಟಕ ಇವರ ಆಶ್ರಯದಲ್ಲಿ 75ನೇಯ  ಅಮೃತೋತ್ಸವ ವಚನೋತ್ಸವ ಕಾರ್ಯಕ್ರಮ ಪತ್ರಿಬಸವ ನಗರದ 2ನೇಯ ಅಡ್ಡರಸ್ತೆಯಲ್ಲಿರುವ ಅನ್ನಪೂರ್ಣಾ ಗೋಪಾಲಸಿಂಗ್  ರಜಪೂತ ಶರಣ ದಂಪತಿಗಳ ಹೀರಾ ಸದನದಲ್ಲಿ ನೆರವೇರಿತು.

ರಜಪೂತ ಶರಣದಂಪತಿಗಳು ಧ್ವಜಾರೋಹಣ ನೆರವೇರಿಸಿದರು. ವಿದ್ಯಾಶ್ರೀ ಅಮರಜಿತಸಿಂಗ್ ದಂಪತಿಗಳು ಬಸವ ಪೂಜೆ ನೆರವೇರಿಸಿದರು. ಅಲ್ಲಮಪ್ರಭುಗಳ ಘನತರವಾದ ಚಿತ್ರದ ರೂಪವ ಬರೆಯ ಬಲ್ಲುದಲ್ಲದೆ……  ಎಂಬ ವಚನ ಕುರಿತು ಶರಣ ಈಶ್ವರ್ ಬೆನ್ನಿ ಚಿಂತನೆಗೈದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷೆ  ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿ ಕನ್ನಡದ ಮೇರು ವಚನ ಸಾಹಿತ್ಯ ಮನೆಮನಗಳ ತಲುಪುತ್ತಿರುವುದು ಸಂತಸ ತಂದಿದೆ ಎಂದರು.

ಪ್ರಾಸ್ತಾವಿಕವಾಗಿ ಪ್ರೇಮಕ್ಕ ಅಂಗಡಿ ಮಾತನಾಡಿದರು. ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷ ಸುವರ್ಣಾ ಬಿಜಗುಪ್ಪಿ  ಸ್ವಾಗತಿಸಿದರು  ಪ್ರೀತಿ ತುಳಜನ್ನವರ ನಿರೂಪಿಸಿದರು. ಮೀನಾಕ್ಷಿ ಕುಡಸೋಮಣ್ಣವರ ವಂದಿಸಿದರು. ಅನ್ನಪೂರ್ಣ ಗೋಪಾಲ ಸಿಂಗ್ ರಜಪೂತ  ಮಲ್ಲಮ್ಮ ಪಾಟೀಲ್ ವಿದ್ಯಾ  ರಾಮಣ್ಣವರ ಕಾಡಪ್ಪ ರಾಮಗುಂಡಿ ದುಂಡಯ್ಯ ಕುಲಕರ್ಣಿ ಪತ್ರಯ್ಯ ಕುಲಕರ್ಣಿ ಮಹಾದೇವ ಕರಡಿಗುದ್ದಿ ಮೀನಾಕ್ಷಿ  ಕುಡಸೋಮಣ್ಣನವರ ಪಾರ್ವತಿ ಕುಲಕರಣಿ ಕಲಾವತಿ ಕಡಕೋಳ  ಪತ್ರಿಬಸವೇಶ್ವರ  ನಗರದ ಅಜಗನ್ನ ಬಳಗದ ಶರಣ ಶರಣಿಯರು ಹಾಜರಿದ್ದರು. ಮುಕ್ತಾಯಕ್ಕ ಬಳಗದವರು ಪೂಜೆ ಪ್ರಾರ್ಥನೆ ನೆರವೇರಿಸಿ ಕೊಟ್ಟರು  ಹಾಗೂ ನಗರದ ನೂರಾರು ಶರಣ ಶರಣೀಯರೂ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group