- Advertisement -
ಮೂಡಲಗಿ: ತಾಲೂಕಿನ ಯಾದವಾಡ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಮಂಗಳವಾರ ಏರ್ಪಡಿಸಿದ್ದ ಒಂದು ಎತ್ತಿನ ಕಲ್ಲು ಜಗ್ಗುವ ಸ್ಪರ್ಧೆ ಜನ ಮನ ಸೆಳೆಯಿತು.
ಸ್ಪರ್ಧೆಯಲ್ಲಿ ಕೆ.ಡಿ ಬುದ್ನಿಯ ಮಾರುತೇಶ್ವರ ಪ್ರಸನ್ನ ಎತ್ತು ಪ್ರಥಮ, ದಾಸನಾಳದ ವೀರಭದ್ರೇಶ್ವರ ಪ್ರಸನ್ನ ಎತ್ತು ದ್ವಿತೀಯ, ಬಸವೇಶ್ವರ ಪ್ರಸನ್ನ ಎತ್ತು ತೃತೀಯ ಹಾಗೂ ಮಲ್ಲಾಪೂರದ ಗೌಡಪ್ಪ ಪರಸಪ್ಪನವರ ಎತ್ತು ಚತುರ್ಥ ಬಹುಮಾನ ಪಡೆದುಕೊಂಡವು.
ಈ ಸಂದರ್ಭದಲ್ಲಿ ರಮೇಶ ಸಾವಳಗಿ, ಹಣಮಂತ ಹ್ಯಾಗಾಡಿ, ಹಣಮಂತ ಚೆಕ್ಕೇಗೌಡ, ಗೋಪಾಲ ಕಾಗವಾಡ, ಗುರುನಾಥ ರಾಮದುರ್ಗ, ಗುರು ಕೇರಿ, ಮಲ್ಲಪ್ಪ ರಾಮದುರ್ಗ ಮತ್ತಿತರು ಇದ್ದರು.