ಸಿಂದಗಿ: ರಾಜ್ಯ ಸರ್ಕಾರವು 7 ನೇ ವೇತನ ಆಯೋಗದಿಂದ ಶೀಘ್ರವಾಗಿ ವರದಿಯನ್ನು ಪಡೆದು ರಾಜ್ಯ ಸರ್ಕಾರಿ ನೌಕರರಿಗೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಆಪೀಸ್ ಆವರಣದಲ್ಲಿ ಸಿಂದಗಿ , ದೇವರಹಿಪ್ಪರಗಿ, ಆಲಮೇಲ ತಾಲ್ಲೂಕು ಶಾಖೆಯ ಸರ್ಕಾರಿ ನೌಕರರು ರವಿವಾರ ಶಾಸಕ ಅಶೋಕ ಎಮ್ ಮನಗೂಳಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ರಾಜ್ಯ ಸರ್ಕಾರಿ ನೌಕರರಿಗೆ 7 ನೆಯ ವೇತನ ಹಾಗೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುವದು .ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆಯ ನೌಕರರು ಮಾಸಿಕ ವಂತಿಗೆ ನೀಡುವ ಮೂಲಕ ರಾಜ್ಯ ಸರ್ಕಾರವು “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು. ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ನೀಡಬೇಕು. ಸರ್ಕಾರವು ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರವಾಗಿ ವರದಿಯನ್ನು ಪಡೆದು ಸರ್ಕಾರ ಈಗಾಗಲೇ ನೀಡಿರುವ ಶೇ 17% ಮಧ್ಯಂತರ ಪರಿಹಾರ ಭತ್ಯೆಯೂ ಸೇರಿದಂತೆ ಶೇ40% ಫಿಟ್ ಮೆಂಟ್ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಿಂದಗಿ ತಾಲೂಕು ಅಧ್ಯಕ್ಷ ಅಶೋಕ ತೆಲ್ಲೂರ. ಆಲಮೇಲ ತಾಲೂಕು ಅಧ್ಯಕ್ಷ ರವಿ ಬಿರಾದಾರ. ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಎಂ.ಜಿ.ಯಂಕಂಚಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ ಎಲ್ಲಾ 31ಜಿಲ್ಲೆ 183 ತಾಲ್ಲೂಕುಗಳಲ್ಲಿ ಶಾಖೆಗಳನ್ನು ಹೊಂದಿದ್ದು .ಸಮಸ್ತ 600 ಲಕ್ಷ ರಾಜ್ಯ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆಯಾಗಿರುತ್ತದೆ ಕಾರಣ ಸರ್ಕಾರ ನೌಕರರ ಹಿತ ರಕ್ಷಣೆ ಮಾಡಲು ನಮ್ಮ ಮನವಿಯ ಬೇಡಿಕೆ ಜಾರಿಗೊಳಿಸುವಂತೆ ಮಾನ್ಯ ಶಾಸಕರು ಒತ್ತಡ ತರುವಂತೆ ಸಂಘದ ಪರವಾಗಿ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಎಲ್ಲ ಸರಕಾರಿ ನೌಕರರು ನೀಡಿದ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಸರಕಾರದಲ್ಲಿ ಚರ್ಚಿಸಿ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಸವನಬಾಗೇವಾಡಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಾನಂದ ಮಂಗನವರ.ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘ ಜಿಲ್ಲಾ ಘಟಕ ಖಜಾಂಚಿ ಜುಬೇದ ಕೇರೂರ. ಜಿಲ್ಲಾ ಶಿಕ್ಷಕರ ಸಂಘದ ಪ್ರತಿನಿಧಿ ಎಸ್ ಹೆಚ್ ಇಂಡಿ. ಗಿರೀಶ ಗತಾಟೆ ಪ್ರಧಾನ ಕಾರ್ಯದರ್ಶಿ ನಿವೃತ ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಬಿರಾದಾರ. ದೇವರಹಿಪ್ಪರಗಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ. ಪಿ.ಸಿ.ತಳಕೇರಿ. ಪಿ.ಎಲ್.ಚಲವಾ ಖಜಾಂಚಿ ಅನ್ವರಹುಸೇನ್ ಮರ್ತೂರ್, ರಾಜ್ಯ ಪರಿಷತ್ ಸದಸ್ಯರು ನೌಕರ ಸಂಘದ ಉಪಾಧ್ಯಕ್ಷೆ ಶೋಭಾ ಚಿಗರಿ .ಬಸಯ್ಯ ಹಿರೇಮಠ, ಎಸ್.ಎಂ.ಚೌಧರಿ, ಇಂದ್ರಾ ಬಳಗಾನೂರ, ಆರ್ ಎಚ್ ಬಿರಾದಾರ, ಸಿದ್ದು ಕಡಬಳಗಾಂವ, ಗಾಲಿಬಾ ಯಲಗಾರ, ಆರ್.ಎಂ.ಕುಮಸಗಿ, ಪಿ.ಎಚ್.ಬಿರಾದಾರ, ಎಲ್.ಎಸ್.ಸೊನ್ನ, ಸಿ.ಬಿ.ಗಡಗಿ, ಸೋಮೇಶಗೌಡ ಪಾಟೀಲ, ದೇವರಹಿಪ್ಪರಗಿ ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ರಾಯಪ್ಪ ಇವಣಗಿ, ಪ್ರಕಾಶ ಅಡಗಲ್ಲ, ಎಂ.ಜಿ.ಚೌಧರಿ, ಎಂ.ಎಸ್.ಮಸಳಿ, ಬಿ.ಜಿ.ತಾಂಬೆ, ಎಂ.ಕೆ.ಬಿರಾದಾರ, ದೈಹಿಕ ಶಿಕ್ಷಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎಂ.ಕೆಂಭಾವಿ, ವಿಜಯಲಕ್ಷ್ಮೀ ಶಹಾಪೂರ, ಝಡ್ ಆಯ್.ಮುನಿಯಾರ, ಕಂದಾಯ ಇಲಾಖೆಯ ಅತ್ತಾರ, ಬಂದಾಳ ಉರ್ದು ಶಾಲೆಯ ಮುಖ್ಯಗುರು ಚೌಧರಿ ಅಪಾರ ತಾಲೂಕು ಸರ್ಕಾರಿ ನೌಕರರು ಇದ್ದರು.