- Advertisement -
ಸಿಂದಗಿ; ಕರ್ನಾಟಕ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ)ಹುಬ್ಬಳ್ಳಿ,ಜಿಲ್ಲಾ ಘಟಕ ವಿಜಯಪುರ, ತಾಲೂಕಾ ಘಟಕ,ಸಿಂದಗಿ ಇವರ ಸಹಯೋಗದಲ್ಲಿ ಮೇ ಎರಡನೇ ವಾರದಲ್ಲಿ ಸಿಂದಗಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಗಾಣಿಗ ನೌಕರರ ಸಮಾವೇಶದ ಪ್ರಯುಕ್ತ ಪ್ರತಿಭಾ ಪುರಸ್ಕಾರಕ್ಕಾಗಿ ಕಳೆದ ಸಾಲಿನ 2021 ಮಾರ್ಚ್/ಏಪ್ರಿಲ್ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಪಾಸಾದ ಅಖಂಡ ಸಿಂದಗಿ ತಾಲೂಕಿಗೆ ಅತ್ಯುನ್ನತ ಶ್ರೇಣಿಯಲ್ಲಿ ಅಂದರೆ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಏ.30 ರ ಒಳಗಾಗಿ ವನಶ್ರೀ ನೌಕರರ ಪತ್ತಿನ ಸಹಕಾರಿ ಸಂಘ ಜ್ಯೋತಿ ನಗರ ಸಿಂದಗಿ ವಿಳಾಸಕ್ಕೆ ಅರ್ಜಿ ಜೊತೆಗೆ ಎಸ್ ಎಸ್ ಎಲ್ ಸಿ ದೃಢೀಕೃತ ಅಂಕಪಟ್ಟಿ,ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರ ಲಗತ್ತಿಸಿ ಕಳುಹಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ 9901140055, 9900589665, 7795639282, 9945354124 ಸಂಪರ್ಕಿಸುವಂತೆ ಕೋರಿದ್ದಾರೆ.