ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ಪಟ್ಟಣದ ಸಂಘಟನೆಯ ಕ್ರಿಯಾಶೀಲರಾದ ಅನಿಲ ಎನ್.ಗಸ್ತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಡಿಎಸ್ಎಸ್ ಮೂಡಲಗಿ ತಾಲೂಕಾ ಸಂಘಟನಾ ಸಂಚಾಲಕ ಶಾಬಪ್ಪ ಕ.ಸಣ್ಣಕ್ಕಿ ಹೇಳಿದರು.
ಅವರು ಪಟ್ಟಣದ ಡಾ:ಅಂಬೇಡ್ಕರ ನಗರದಲ್ಲಿನ ಅಂಬೇಡ್ಕರ ಮಂದಿರದಲ್ಲಿ ಕ.ರಾ.ಡಿ.ಎಸ್.ಎಸ್ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ನೇಮಕ ಮಾಡಿ ಅನಿಲ ಎನ್.ಗಸ್ತಿ ಅವರಿಗೆ ಆದೇಶ ಪತ್ರ ವಿತರಿಸಿ ಮತ್ತು ಸತ್ಕರಿಸಿ ಮಾತನಾಡಿ,ಗಸ್ತಿ ಅವರು ವಿದ್ಯಾರ್ಥಿಗಳ ಕುಂದು ಕೊರತೆಗಳ ನಿವಾರಣೆಗಾಗಿ ಶ್ರಮಿಸಬೇಕೆಂದ ಅವರು ಡಾ: ಬಾಬಾಸಾಹೇಬ ಅಂಬೇಡ್ಕರರವರ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಕಾರ್ಯ ನಿರ್ವಹಿಸಬೇಕೆಂದರು.
ಈ ಸಮಯದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಬಾಳೆಶ ಬನಹಟ್ಟಿ, ತಾಲೂಕಾ ಸಂಚಾಲಕ ಶಾಬು ಸಣ್ಣಕ್ಕಿ, ರಾಜು ಪರಸನ್ನವರ, ವಿಲಾಸ ಸಣ್ಣಕ್ಕಿ, ಸುಂದರ ಬಾಲಪ್ಪನವರ ಮತ್ತಿತರರು ಗಸ್ತಿ ಅವರನ್ನು ಅಭಿನಂದಿಸಿ ಶುಭಕೋರಿದರು.