- Advertisement -
ಸಿಂದಗಿ: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ತಾಜ ಹೊಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಡಳಿತ ಸೇವೆಯಲ್ಲಿ ಉನ್ನತ ಸೇವೆಯಲ್ಲಿ ತೊಡಗಿರುವ ಆಯ್ಎ ಎಸ್ ಅಧಿಕಾರಿ ಸಿಂದಗಿಯ ಶ್ರೀಮತಿ ಗಂಗೂಬಾಯಿ ಮಾನಕರ ಅವರಿಗೆ ಏಷಿಯಾ ಟುಡೇ ವತಿಯಿಂದ ಕೊಡಮಾಡಿದ ಪ್ರಶಸ್ತಿಯನ್ನು ಕರ್ನಾಟಕದ ಘನತವೆತ್ತ ರಾಜ್ಯಪಾಲರಾದ ವಜುಬಾಯಿ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಮಾರಂಭದಲ್ಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ,ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ, ಏಷಿಯಾ ಟುಡೇ ಮುಖ್ಯಸ್ಥರಾದ ಯುವ ಬಲ ಜಾಗೃತಿ ಪರಿಷತ್ ಕುಮಾರಿ ಪ್ರಾಚಿ ಗೌಡರವರು ಉಪಸ್ಥಿತರಿದ್ದರು.