spot_img
spot_img

ಅರಭಾಂವಿ ನಾಡ ಕಛೇರಿಯಲ್ಲಿ ಎಜೆಂಟರ ಹಾವಳಿ ತಡೆಗೆ ಕರವೇ ಒತ್ತಾಯ

Must Read

spot_img
- Advertisement -

ಖಾಸಗಿ ಸಿಬ್ಬಂದಿಯಿಂದ ಹಣ ವಸೂಲಿ ದಂಧೆ

ಮೂಡಲಗಿ : ಮೂಡಲಗಿ ತಾಲೂಕಿನ ಅರಭಾಂವಿಯ ನಾಡ ಕಛೇರಿಗೆ ಬರುವ ಸಾರ್ವಜನಿಕರಿಗೆ ಎಜೆಂಟರಿಂದ ನಿತ್ಯ ಕಿರುಕುಳವಾಗುತ್ತಿದ್ದು ಹಣ ನೀಡಿದರೆ ಮಾತ್ರ ಶೀಘ್ರವಾಗಿ ಕೆಲಸ ಇಲ್ಲದಿದ್ದರೆ ಯಾವ ಕೆಲಸಗಳು ಆಗುವದಿಲ್ಲ ಇದನ್ನು ಆದಷ್ಟು ಬೇಗನೆ ನಿಲ್ಲಿಸಬೇಕು ಇದರಲ್ಲಿ ಶಾಮೀಲಾಗಿರುವ ಖಾಸಗಿ ಸಿಬ್ಬಂದಿ ವರ್ಗವನ್ನು ತೆಗೆದು ಹಾಕಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಿದ್ದು ಕಂಕನವಾಡಿ ಆಗ್ರಹಿಸಿದರು,
ಮಂಗಳವಾರ ಮೂಡಲಗಿ ತಾಲೂಕಾ ದಂಡಾಧಿಕಾರಿಗಳ ಕಛೇರಿಯಲ್ಲಿ ಕರುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ ನೇತೃತ್ವದಲ್ಲಿ ತಹಶೀಲ್ದಾರ ಮಹಾದೇವ ಸನಮೂರಿ ಅವರಿಗೆ  ಮನವಿ ನೀಡಿ ಅವರು ಮಾತನಾಡಿದರು,
ರಾಜ್ಯ ಕಾರ್ಯದರ್ಶಿ ಮಂಜುನಾಥ ಜಲ್ಲಿ  ಮನವಿ ಓದಿ ಈ ಕುರಿತು ತಹಶೀಲ್ದಾರ ಅವರು ಎಜೆಂಟರ ಮೇಲೆ ಹಾಗೂ ಖಾಸಗಿ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು,
ಏಜೆಂಟರು ಹಾಗೂ ಖಾಸಗಿ ಸಿಬ್ಬಂದಿಗಳು ಹಣದ ಹೊಂದಾಣಿಕೆ ಮಾಡಿಕೊಂಡು ಸಾರ್ವಜನಿಕರಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದು, ಖಾಸಗಿ ಸಿಬ್ಬಂದಿಗಳು ಕಛೇರಿಯ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಅಸಭ್ಯವಾಗಿ  ಮಾತನಾಡುತ್ತಾರೆ, ಏಜೆಂಟರೂ ಕಛೇರಿಯಲ್ಲಿ ಕಾಲ ಕಳೆಯುತ್ತಾರೆ ಇದಕ್ಕೆ ಕಡಿವಾಣ ಹಾಕಬೇಕು,ಇಲ್ಲದಿದ್ದರೆ ಕರುನಾಡ ರಕ್ಷಣಾ ವೇದಿಕೆಯಿಂದ ಬೃಹತ್ ಮಟ್ಟದ ಹೋರಾಟ ಮಾಡಬೇಕಾಗುತ್ತದೆ  ಎಂದು ಮನವಿಯಲ್ಲಿ ತಿಳಿಸಿದ್ದಾರೆ,
ಈ ಸಮಯದಲ್ಲಿ ಗೋಪಾಲ ಗೋಪಾಳಿ, ಲಕ್ಷ್ಮಣ ಪೂಜೇರಿ, ಬಸು ಮಲ್ಹಾರಿ, ವಿಠಲ ಪೂಜೇರಿ, ಆನಂದ ಕೋಳಿ, ಮುತ್ತಪ್ಪ ಪೂಜೇರಿ, ಹಣಮಂತ ಕಳ್ಯಾಗೋಳ, ಹಾಲಪ್ಪ ಪೂಜೇರಿ, ಲಕ್ಕಪ್ಪ ಪೂಜೇರಿ, ಬಸವರಾಜ ಪೂಜೇರಿ ಇದ್ದರು

- Advertisement -
- Advertisement -

Latest News

ಲೇಖನ : ಹಣ ಎಲ್ಲವೂ ಅಲ್ಲ ಆದರೆ ಹಣವಿಲ್ಲದೆ ಏನೇನಿಲ್ಲಾ

ಹೌದು, ಇವತ್ತಿನ ಕಾಲಘಟ್ಟಕ್ಕೆ ಹಣಕ್ಕೆ ನೀಡುವ ಪ್ರಾಶಸ್ತ್ಯ ಬೇರಾವುದಕ್ಕೂ ಇಲ್ಲದಾಗಿದೆ. ಒಂದು ಕಾಲಕ್ಕೆ ಸಮಯ, ಸಂಬಂಧ, ಆತ್ಮವಿಶ್ವಾಸ ಇವುಗಳಿಗೆ ಬೆಲೆ ನೀಡುತ್ತಿದ್ದ ಜನರು ಈಗ ಹಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group