spot_img
spot_img

ಅರಿವು ಮತ್ತು ಆಚಾರ (ಜ್ಞಾನ ಮತ್ತು ಕ್ರಿಯೆ) ಗುರು ಬಸವಣ್ಣನವರ ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಗಳು… ಡಾ. ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಅಭಿಮತ

Must Read

- Advertisement -

ಬೆಳಗಾವಿ: ಗುರು ಬಸವಣ್ಣನವರ ಇಷ್ಟಲಿಂಗ ಪರಿಕಲ್ಪನೆಯು ಸಮಷ್ಠಿ ಪ್ರಜ್ಞೆಯ ಆರಾಧನೆ ಮೂಲವಾಗಿ , ಶಿವಯೋಗ ಸಾಧನೆಯ ಸೂತ್ರವಾಗಿದೆ ಎಂದು ಡಾ. ಮ. ನಿ. ಪ್ರ ಕಾಯಕ – ದಾಸೋಹದ ಬಸವಲಿಂಗ ಸ್ವಾಮೀಜಿ ಹೇಳಿದರು.

ದಿ.21.04.2023 ರಂದು ಬೆಳಗಾವಿಯ ಮಹಾಂತೇಶ ನಗರದ ಲಿಂಗಾಯತ ಸಂಘಟನೆಯ ವಾಷಿ೯ಕೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಕ್ರಮದ ಎರಡನೇ ದಿನದಂದು ಚಿತ್ತರಗಿ ವಿಜಯ ಮಹಾಂತೇಶ, ತೀಥ೯,ಶಿರೂರದ ಪೂಜ್ಯರಾದ ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿಗಳು ಗುರು ಗುರು ತತ್ವದ ಮಹತ್ವವನ್ನು ಅಲ್ಲಮಪ್ರಭುಗಳ ಅಕ್ಕನ ವಚನಗಳ ವಿಶ್ಲೇಷಣೆ ಮಾಡಿ ಅವರು ಮಾತನಾಡಿದರು.

ಅರಿವನ್ನು ಪಡೆಯುವಲ್ಲಿ ಗುರುವನ್ನೇ ಪ್ರಶ್ನೆ ಮಾಡುವ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಶರಣೆಯ ವಚನ ವಿಮರ್ಶೆಯೊಂದಿಗೆ ಅವರು ವಿವರಿಸಿದರು.

- Advertisement -

ನಿಜವಾದ ಗುರುವಿನ ಅಷ್ಟಗುಣಗಳನ್ನು ಉದಾಹರಣೆಗಳೊಂದಿಗೆ ತಮ್ಮ ಅನುಭಾವದ ನುಡಿಗಳ ಮೂಲಕ ನೆರೆದಿರುವ ಶರಣ ಸಮೂಹವನ್ನು ಸ್ವಾಮೀಜಿ ಮಂತ್ರಮುಗ್ದರನ್ನಾಗಿಸಿದರು.

ಬೆಳಗಾವಿಯವರೇ ಆದ ಮಾತೋಶ್ರೀ ವಾಗ್ದೇವಿ ತಾಯಿಯವರು .ಶರಣರ ನಡೆ ಮತ್ತು ನುಡಿ .. ಸಾಮರಸ್ಯದ ಬದುಕು.. ವಚನಗಳಲ್ಲಿರುವ ಜೀವನ ಮೌಲ್ಯಗಳನ್ನು ಸೂಕ್ಷ್ಮವಾಗಿ ಸೂಕ್ತ ದೃಷ್ಟಾಂತಗಳೊಂದಿಗೆ ತಿಳಿಯಪಡಿಸಿದರು.

- Advertisement -

ಇಂದಿನ ಪ್ರಸಾದ ದಾಸೋಹ ಸೇವೆಗೈದ ಲೇಖಕಿಯರ ಸಂಘದ ಪೂರ್ವದ ಅಧ್ಯಕ್ಷರಾಗಿದ್ದ ಶರಣೆ ಜ್ಯೋತಿ ಬಾದಾಮಿ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯೂಜಿಲೆಂಡ್ ದೇಶದ ಏಷ್ಯಾ ಪೆಸಿಫಿಕ್ ಪ್ರಶಸ್ತಿಗೆ ಪಾತ್ರರಾದ ಡಾ. ದಾನಮ್ಮ ಝಳಕಿ ಮೇಡಂ ಹಾಗೂ ಮoಗಲಾ ಮಠದ ಸಂಘಟನೆಯ ಮೌಲಿಕ ಕಾರ್ಯಗಳ ಕುರಿತಾಗಿ ಮತ್ತು ಸಂಘಟನೆಯ ಮೂಲಕ ನೆರವೇರುತ್ತಿರುವ ರಕ್ತದಾನ ಶಿಬಿರ, ನೇತ್ರ ತಪಾಸಣೆ, ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ಬೇಸಿಗೆ ಶಿಬಿರಗಳು ಹೀಗೆ ಹಲವಾರು ವಾರ್ಷಿಕ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಇಷ್ಟಲಿಂಗದ ಕುರಿತಾಗಿ ತಮ್ಮ ಸಂಶೋಧನೆಗಾಗಿ ಏಷ್ಯಾ ಪೆಸಿಫಿಕ್ ಪ್ರಶಸ್ತಿಗೆ ಭಾಜನರಾದ ಇನ್ನೋರ್ವ ಸಾಧಕರಾದ ಬೆಳಗಾವಿಯ ಕೆಎಲ್ಇ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅವಿನಾಶ್ ಕವಿ ತಮ್ಮ ಅನುಭಾವದ ಮೂಲಕ ಇಷ್ಟಲಿಂಗದ ಮಹತ್ವದ ಕುರಿತಾಗಿ… ಇಷ್ಟಲಿಂಗ… ಪರಶಿವನ ಸಂಕೇತ, ಅರುಹಿನ ಕುರುಹು, ಸಮಾನತೆಯ ಮಾದ್ಯಮ ಹೀಗೆ ಅದರ ಐದು ಆಯಾಮಗಳ ಕುರಿತಾದ ವೈಜ್ಞಾನಿಕ ನೋಟವನ್ನು ಪ್ರಸ್ತುತ ಪಡಿಸಿದರು.. ಗುರು ಬಸವಣ್ಣ ಇಷ್ಟಲಿಂಗದ ಜನಕ.. ಸಂಶೋಧಕ ಅಲ್ಲ ಎಂಬುದನ್ನು ಹಲವಾರು ವಚನಗಳ ಮೂಲಕ ತಿಳಿಸಿದರು.

ಸಂಘಟನೆಯ ಉಪಾಧ್ಯಕ್ಷರಾದ ಶರಣ ಸಂಗಮೇಶ ಅರಳಿ ಸ್ಟಾಗತಿಸಿದರು. ಮಹಾದೇವಿ ಅರಳಿಯವರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಸಂಘಟನೆಯ ಶರಣೆಯರ ಬಳಗದಿಂದ ವಚನ ನೃತ್ಯ ರೂಪಕ ಪ್ರದರ್ಶನ, ವಚನ ಗಾಯನ, ಜಾನಪದ ಹಾಡು — ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ವೇದಿಕೆ ಶೋಭಿಸುವಂತಾಗಿತ್ತು . ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ಶರಣರಾದ ಸದಾಶಿವ ದೇವರಮನಿ ಕಾರ್ಯಕ್ರಮದ ನಿರೂಪಣೆಗೈದರು.

ಇನ್ನು ಕೊನೆಯ ದಿನವೂ ನಡೆಯುವ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗಿಗಳಾಗಲು ವಿನಂತಿಸಲಾಯಿತು . ಸಂಘಟನೆಯ ಕಾರ್ಯದರ್ಶಿಗಳಾದ ಸುರೇಶ ನರಗುಂದ, ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ ಪಾಟೀಲ್, ಅಶೋಕ ಇಟಗಿ, ಸತೀಶ ಪಾಟೀಲ,ಶoಕರ ಶೆಟ್ಟಿ,ರಮೇಶ ಕಳಸನ್ನವರ, ಪ್ರಭು ಪಾಟೀಲ, ವಿಜಯ ಹುದಲಿಮಠ, ಮಹಾoತೇಶ ಮೆಣಶಿನಕಾಯಿ,ದೀಪಾ ಪಾಟೀಲ್. ಲಕ್ಷ್ಮೀ ಜೇವನಿ, ಕಮಲಾ ಗಣಾಚಾರಿ, ಎಂ.ಬಿ. ತಿಗಡಿ . ವಿ.ಕೆ.ಪಾಟೀಲ ಹೀಗೆ ಸಂಘಟನೆಯ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group