- Advertisement -
ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷವೂ ಲಿಂಗಾಯತ ಧರ್ಮಗುರು ಬಸವಣ್ಣನವರ ಲಿಂಗೈಕ್ಯೆ ದಿನ ಬಸವ ಪಂಚಮಿ ಆಚರಿಸಲಾಗುತ್ತಿದೆ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ತಿಳಿಸಿದ್ದಾರೆ.
ಬೆಳಗಾವಿ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರ ಉದ್ಯಾನದಲ್ಲಿರುವ ಶ್ರೀ ಬಸವಣ್ಣನವರ ಪ್ರತಿಮೆಯ ಬಳಿ ಬಸವ ಪಂಚಮಿ, ಬಸವ ಪಂಚಮಿಯ ನಿಮಿತ್ಯ ಲಿಂಗಾಯತ ಧರ್ಮಗುರು ಬಸವಣ್ಣನವರಿಗೆ ಧನ್ಯವಾದ ಮತ್ತು ಧರ್ಮ ಕಟ್ಟಿದ ಬಸವಾದಿ ಶರಣರಿಗೆ ಶರಣು ಶರಣಾರ್ಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಲಿಂಗಾಯತ ಧರ್ಮ ಮಹಾಪೀಠದ ಶ್ರೀ ಬಸವಪ್ರಭು ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು. ಗೋಕಾಕ ತಾಲೂಕಾ ವಚನೋತ್ಸವ ಸಮಿತಿಯ ಅಧ್ಯಕ್ಷ ಘಟಪ್ರಭಾದ ಜಿ.ಎಸ್. ಕರ್ಪೂರಮಠ ಮತ್ತು ಬೆಳಗಾವಿ ಶಿವಯೋಗಿ ಶಿಕ್ಷಣ ಸಂಸೆಯ ಅಧ್ಯಕ್ಷ ಅಶೋಕ ಧರಿಗೌಡರ ಅವರುಗಳು ಮುಖ್ಯ ಅತಿಥಿಗಳಾಗಿರುವರು ಎಂದು ಅವರು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.