- Advertisement -
ಬೀದರ – ಬಸವಕಲ್ಯಾಣ ತಾಲೂಕು ಮತ್ತು ಹಣಮಂತ ವಾಡಿ ಹಾಗೂ ಮತ್ತಿತರೆಡೆ ರಾತ್ರಿ ವೇಳೆ ರಸ್ತೆ ಬದಿ ನಿಲ್ಲಸಿದ್ದ ಲಾರಿ ಕಳವು ಮಾಡುತ್ತಿದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಡೆ ಲಾರಿ ಕಳವು ಮಾಡಿದ್ದರು ಎನ್ನಲಾಗಿದ್ದು ಇವರನ್ನು ತಡರಾತ್ರಿ ಬಸವಕಲ್ಯಾಣ ಗ್ರಾಮೀಣ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬೀದರ ತಾಲೂಕಿನ ವೈಲೂರನ ಶೇಖ ವಹಾಬ್.ಮಹಾರಾಷ್ಟ್ರ ಉದಗಿರ ನಿವಾಸಿ ಆದಿಲ ಮೆರಾಜ, ಹೈದರಾಬಾದ್ ನಿವಾಸಿ ಖುರ್ಷಿದ್ ಅಹ್ಮದ ಎಂದು ಗುರುತಿಸಲಾಗಿದೆ.
- Advertisement -
ಲಾರಿಗಳ ಪತ್ತೆ ಕಾರ್ಯ ನಡೆಸಿದ ಸಿಪಿಐ ವಿಜಯಕುಮಾರ ಸಬ್ ಇನ್ಸ್ಪೆಕ್ಟರ್ ಅಂಬರೀಶ ವಾಘಮೋರೆ ನೇತ್ರತ್ವದಲ್ಲಿ ಕಳ್ಳರನ್ನು ಬಂಧಿಸಲಾಯಿತು.
ವರದಿ: ನಂದಕುಮಾರ ಕರಂಜೆ, ಬೀದರ