- Advertisement -
ಬೀದರ – ರಾಜ್ಯ ಸರ್ಕಾರ ಓಮಿಕ್ರಾನ್ ವೈರಸ್ ತಡೆಗಟ್ಟಲು ನೈಟ್ ಕರ್ಪ್ಯೂ ಆದೇಶ ಮಾಡಿರುವ ಹಿನ್ನಲೆಯಲ್ಲಿ ಬೀದರ್ ಪೊಲೀಸರು ರಾತ್ರಿ ಪ್ರತಿಯೊಂದು ಕಾರು ಬೈಕ್ ಪರಿಶೀಲನೆ ಮಾಡಿದರು.
ಐಡಿ ಕಾರ್ಡ್ ಹೊಂದಿರುವ ಜನರಿಗೆ ಮಾತ್ರ ರಸ್ತೆ ಮೇಲೆ ಓಡಾಡುವ ಅವಕಾಶ ನೀಡಿದ್ದು, ಬೀದರ್ ಡಿವೈಎಸ್ ಪಿ ಸತೀಶ್ ಅವರ ನೇತೃತ್ವದಲ್ಲಿ ನಗರದಲ್ಲಿ ಪುಲ್ ಟೈಟ್ ನಾಕಾಬಂದಿ ಹಾಕಲಾಗಿತ್ತು.
- Advertisement -
ಅನಗತ್ಯ ರಸ್ತೆಗೆ ಇಳಿದ ಜನರಿಗೆ ಲಾಟಿ ಏಟಿ ರುಚಿ ತೋರಿಸಿದ ಬೀದರ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದರು. ಬೀದರ್ ನಗರದ ಓಲ್ಡ್ ಸಿಟಿ ,ಮಡಿವಾಳ ಸರ್ಕಲ್, ಅಂಬೇಡ್ಕರ್ ಸರ್ಕಲ್, ಮತ್ತು ಬೀದರ ಹಲವು ನಗರದ ಕಡೆಗಳಲ್ಲಿ ಅಂಗಡಿ ಬಂದ್ ಮಾಡಲು ಸೂಚನೆ ನೀಡುತ್ತ ಇಡೀ ರಾತ್ರಿ ಪೊಲೀಸರು ಸಿಟಿ ರೌಂಡ್ ಹಾಕಿದರು ಈ ಮೂಲಕ ಮೊದಲ ದಿನದ ರಾತ್ರಿ ಕರ್ಫ್ಯೂ ಯಶಸ್ವಿಯಾಗಿ ವಂತೆ ನೋಡಿಕೊಂಡರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ