“ಅತ್ಯುತ್ತಮ ವಿಜ್ಞಾನ ಶಿಕ್ಷಕ ಅಗ್ನಿ “

Must Read

ಸಿಂದಗಿ: ತಾಲೂಕಿನ ಸರ್ಕಾರಿ ಪ್ರೌಢಶಾಲೆ ಚಟ್ಟರಕಿಯ ವಿಜ್ಞಾನ ಶಿಕ್ಷಕ ಪಿ ಎಸ್  ಅಗ್ನಿ ಅವರಿಗೆ  ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ 13 ವರ್ಷಗಳ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ 2020-21 ನೇ ಸಾಲಿನ ವಿಜಯಪುರ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಎಂದು ಗುರುತಿಸಿ ಸಪ್ಟೆಂಬರ್ 5 ಶಿಕ್ಷಕರ ದಿನೋತ್ಸವದಂದು ಪ್ರಶಸ್ತಿಯನ್ನು ನೀಡಿ ಹರ್ಷಿಸಿದೆ.

ಸದರಿ ಶಿಕ್ಷಕರಿಗೆ ಗೌರವಪೂರ್ವಕವಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ  ಶಿಕ್ಷಕರ ಸಂಘದ ಅಧ್ಯಕ್ಷ  ಆರ್ ಎಚ್ ಬಿರಾದಾರ್ ಹಾಗೂ ಕಾರ್ಯದರ್ಶಿ ರಮೇಶ್ ಬಿರಾದಾರ್ ಸಹಕಾರ್ಯದರ್ಶಿ ಶಿವಾನಂದ ಶಹಾಪುರ, ಸಂಘಟನಾ ಕಾರ್ಯದರ್ಶಿ  ಎಸ್.ಆರ್.ನಾಯಕ್,  ಸಿದ್ದರಾಮ ಮಲಗೊಂಡ ಅವರು ಪ್ರಶಸ್ತಿ ಪಡೆದ  ವಿಜ್ಞಾನ ಶಿಕ್ಷಕ ಅಗ್ನಿ ಅವರಿಗೆ ಚಟ್ಟರಕಿ ಪ್ರೌಢ ಶಾಲೆಗೆ ತೆರಳಿ ಅದ್ದುರಿಯಾಗಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘ ಇಂಡಿ ತಾಲೂಕ ಅಧ್ಯಕ್ಷ  ಸಂಗನಗೌಡ  ಹಚ್ಚಡದ,  ಸಂಜು ಎಸ್ ಬುಲ್ ಬುಲೆ, ಅರ್ಜುನ್ ಮಲ್ಲೆವಾಡಿ, ಸಿದ್ದು ಕಂಟಿಗೊಂಡ ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು. ಚಟ್ಟರಕಿ ಸರ್ಕಾರಿ ಪ್ರೌಢಶಾಲೆಯ ಸಮಸ್ತ ಸಿಬ್ಬಂದಿವರ್ಗದವರು ಶಾಲೆಗೆ ಸನ್ಮಾನಿಸಲು ಬಂದ ಅತಿಥಿಗಳಿಗೆ ಉತ್ತಮವಾದ ಸತ್ಕಾರಮಾಡಿ ಗೌರವಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group