spot_img
spot_img

ಭಾದ್ರಪದ ಮಾಸಾಚರಣೆ

Must Read

- Advertisement -

ಸಿಂದಗಿ: ಪಟ್ಟಣದ ಸಾರಂಗಮಠದ ಆವರಣದಲ್ಲಿ ಭಾದ್ರಪದ ಮಾಸದ ಮೊದಲನೆಯ ಮಂಗಳವಾರ ಎಲ್ಲರ ಕುಲದೈವ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವದ ನಿಮಿತ್ತ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಘಟಕದ ಮಹಿಳೆಯರಿಂದ ಶ್ರೀ ವೀರಭದ್ರಸ್ವಾಮಿಯ ಭಾವಚಿತ್ರಕ್ಕೆ ಪುಷ್ಪಗಳನ್ನರ್ಪಿಸುವ ಮೂಲಕ ಆಚರಿಸಿದರು.

ರಾಷ್ಟ್ರಾಧ್ಯಕ್ಷ ಪ್ರದೀಪ್ ಕಂಕಣವಾಡಿಯವರು ಹುಟ್ಟು ಹಾಕಿದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಒಂದು ಭಾಗವಾದ ಈ ಮಹಿಳಾ ಘಟಕವು ಲಿಂ,ಶ್ರೀ ಚನ್ನವೀರ ಶಿವಾಚಾರ್ಯರ ಕೃಪಾರ್ಶೀವಾದಿಂದ ಹಾಗೂ ಮಾತೃಹೃದಯಿಗಳಾದ ಡಾ,ಪ್ರಭುಸಾರಂಗದೇವ ಶಿವಾಚಾರ್ಯರ ಅನುಗ್ರಹದಿಂದ ವೇದಾಧ್ಯಯನ ಕಲಿತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಬಂದಿದೆ. ಮುಂಬರುವ ದಿನಗಳಲ್ಲಿ ಸಾಮಾಜಿಕ ಕ್ಷೇತ್ರದಲ್ಲೂ ಭಾಗವಹಿಸುವ ಆಶಯ ಹೊಂದಿದ್ದು ಆ ಕಾರ್ಯಗಳು ಯಶಸ್ವಿಯಾಗಲು ಆ ಸ್ವಾಮಿಯ ಅನುಗ್ರಹ ನಮ್ಮ ಮೇಲಿರಲಿ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ಹಿರೇಮಠ ಹೇಳಿದರು.

ಇದೆ ಸಂದರ್ಭದಲ್ಲಿ ಅರವತ್ತು ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತ ಧಾರ್ಮಿಕ ಕಾರ್ಯಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ನಿವೃತ್ತಿ ಹೊಂದಿದ ಮಹಾದೇವಿ ಅಂಬಲಗಿ ಹಾಗೂ ಮಹಿಳೆಯರಿಗೆ ವೇದಾಧ್ಯಯನ ಮಾಡಿಸಲು ಗುರುಗಳಲ್ಲಿ ಅರಿಕೆ ಮಾಡಿ ಮಹಿಳೆಯರಿಗೆ ಪ್ರೇರಣೆಯಾದ ಗಂಗಮ್ಮ ಗಣಾಚಾರಿ, ಕಬ್ಬಿಣದ ಕಡಲೆಯಾಗಿದ್ದ ಶ್ರೀ ರುದ್ರ ಪಠಣ ಮಾಡುವುದನ್ನು ಸುಲಿದ ಬಾಳೆ ಹಣ್ಣಿನಂತೆ ಸರಾಗವಾಗಿ ಪಠಣ ಮಾಡಲು ಕಲಿಸಿದ ವೇದಮೂರ್ತಿ ಮಲ್ಲಯ್ಯ ಹಿರೇಮಠ ಹಾಗೂ ಹಿರಿಯ ನಾಗರಿಕರಾದ ಶರಣಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

- Advertisement -

ಜಯಂತ್ಯುತ್ಸವಕ್ಕೆ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ವೀರಶೈವ ಲಿಂಗಾಯತ ಸಂಘಟನೆಯ ಪುರೋಹಿತ ಘಟಕದ ಕಾರ್ಯದರ್ಶಿ ನಿಂಗಯ್ಯ ಹಿರೇಮಠ ಅವರು ಪ್ರಾರ್ಥಿಸಿದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group